ಮನುಷ್ಯನು ಬದುಕುವದೆ ಮೂರೂ ಸ್ತರಗಳಲ್ಲಿ.ದೇಹ,ಮನಸ್ಸು,ಬುದ್ಧಿ,ಎಂದು ಅವುಗಳನ್ನು ಗುರುತಿಸಿಕೊಳ್ಳಲಾಗಿದೆ ಭಾಷೆಯ ಅವಶ್ಯಕತೆಯೂ ಈ ಮೂರೂ ಸ್ತರಗಳಲ್ಲೂ ಇದ್ದಇದೆ.ಈ ಮೊದಲು ಚರ್ಚಿಸಿದ ಭಾಷೆಯ ಎರಡು ಬಗೆಯ ಪ್ರಯೋಜನಗಳು ಮನುಷ್ಯನ ದೇಹ ಮತ್ತು ಬುದ್ಧಿಗಳ ಅವಶ್ಯಕತೆಗಳಿಗೆ ಸಂಬಧಿಸಿದ ವಿಷಯಗಳಾಗಿವೆ.ಆದರೆ ಮನುಷ್ಯನ ಮನಸ್ಸಿನ ಅಗತ್ಯಗಳ ಸ್ವರೂಪವೇ ಬೇರೆ ಇದೆ.ಈ ಸ್ವರೂಪದ ಮುಖ್ಯ ಲಕ್ಷನ ಅದರ ಅನಂತವಾದ ಅಸ್ತಿತ್ವದಲ್ಲಿಯಇದೆ ಎನ್ನಬೇಕಾಗುತ್ತದೆ.;;'ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೊಕ್ಷಯೊ ''ಎಂಬ ಮಾತೂ ಇದನ್ನೇ ಬೇರೊಂದು ರೀತಿಯಲ್ಲಿ ಹೇಳುತ್ತಿರಬೇಕು.ಈ ಮನಸ್ಸಿನ ಯಾವುದೇ ಅಗತ್ಯವೂ ವ್ಯಕ್ತೀಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮಾತ್ರವಲ್ಲ ಒಬ್ಬನೇ ಮನುಷ್ಯನಲ್ಲೂ ಅದು ಭಿನ್ನ ಭಿನ್ನ ಸಂದರ್ಭಗಳಲ್ಲಿ ಅದು ಭಿನ್ನವಾಗಿ ಇರುತ್ತದೆ.ಹೀಗಾಗಿ ಮನಸ್ಸಿನ ಭಾಷೆಯ ಅವಶ್ಯಕತೆಯೂ ಬಹಳ ಭಿನ್ನವಾದ ರೀತಿಯಲ್ಲಿಯೇ ಇರುತ್ತದೆ.
ಮನಸ್ಸಿನ ಈ ಬಗೆಯ ವಿಭಿನ್ನ ಸ್ಥಿತಿಗಳನ್ನು ಲೆಕ್ಕ ಹಾಕಿ ಇವು ಇಸ್ತೆನ್ದು ಹೇಳಲುಬಾರದು.ಹಾಗೆಂದು ಅವುಗಳ ಬಗೆಗೆ ಚಿಂತನೆಯನ್ನೇ ನಿಲ್ಲಿಸಲೂ ಆಗದು.ಅದಕ್ಕೆಂದೇ ಸ್ಥೂಲವಾಗಿ ಈ ಮನಸ್ಸಿನ ಅನುಭವಗಳನ್ನು ಸುಖ ಹಾಗು ದುಖಗಳೆಂಬ ಪರಿಭಾಷೆಯಲ್ಲಿ ಗುರುತಿಸಿಗೊಂಡು ನಮ್ಮ ಚಿಂತನೆ ಬೆಳೆದಿದೆ.
ಈ ಸುಖ -ದುಖಗಳು ಏಕೆ ಮತ್ತು ಹೇಗೆ ಹುಟ್ಟುತ್ತವೆ ಎಂಬುದರ ಚಿಂತನೆ ಧಾರ್ಮಿಕ ತತ್ವಜ್ಞಾನದ ದಾರಿ ಹಿಡಿದರೆ ಅವುಗಳ ಅವಶ್ಯಕತೆಗೆ ತಕ್ಕಂತೆ ಭಾಷೆಯನ್ನೂ ಮನುಷ್ಯ ಹೇಗೆ ರುಪಿಸಿಕೊಳ್ಳುತ್ತಾನೆ ಎಂಬ ಚಿಂತನೆ ಭಾಷಾಶಾಸ್ತ್ರದ ಹಾದಿ ಹಿಡಿದು
ಮುನ್ನಡೆದಿವೆ.ಇದರ ಒಂದು ಪರಿಣಾಮವಾಗಿ ನಮ್ಮಲ್ಲಿ ಯಾವ ಬಗೆಯ ಭಾಷಾಶಾಸ್ತ್ರದ ಪ್ರಸ್ಥಾನಗಳೂ ತತ್ವಶಾಸ್ತ್ರದ
ಉಪಾಂಗವಾಗಿಯೇ ಬೆಳೆದಿವೆ.ಆಟ ಭರ್ತರಹರಿ ಇರಲಿ ಅಭಿನವಗುಪ್ತನಿರಲಿ ಅವರೆಲ್ಲರೂ ಏಕಕಾಲದಲ್ಲೇ ತತ್ವಜ್ಞಾನಿಗಳು
ಹಾಗು ಭಾಷಾಶಾಸ್ತ್ರಜ್ಞರು ಆಗಿರುವದು ಸಹಜವೇ ಆಗಿದೆ.
ನಾವು ಯಾವುದನ್ನು ಕಾವ್ಯಭಾಷೆಯೆಂದು ಕರೆಯುತ್ತೇವೋ ಅದರ ಅಸ್ತಿತ್ವವು ಮನುಷ್ಯನ ಈ ಸುಖ-ದುಖಾನುಭೂತಿಯ
ಪರಿಪ್ರೆಕ್ಷದಲ್ಲಿ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ನಾವು ಈಗ ಗಮನಿಸಬಹುದು.
No comments:
Post a Comment