Monday, 21 November 2011

anudinaabhavaabdhiyalli....16

ಆದರೆ ನಮಗೆ ಅದನ್ನು ಬಿಟ್ಟರೆ ಬೇರೆ ದಾರಿಯೂ ಇಲ್ಲ.ಹೀಗಾಗಿ ಒಂದು ಕವಿತೆ ಬಹುಜನ ಸಮಾಜದಲ್ಲಿ ಸಶಕ್ತವೆಂದು ಒಪ್ಪಿತವಾಗಿದ್ದರೂ ಆ ಕವಿತೆಯ ಶಕ್ತಿಯು ಪ್ರತಿಯೋಬ್ಬನಲ್ಲಿ ಅಂತರಾನುಭವಕ್ಕೆ ದಕ್ಕಿದ ರೀತಿ ಬೇರೆಯೇ ಆಗಿರುತ್ತದೆ
            ಈ ವಾಸ್ತವದ ಒಂದು ಪರಿಣಾಮವೆಂದರೆ ಹತ್ತು ಜನರು ಒಂದು ಕವಿತೆಯನ್ನು ಶ್ರೆಷ್ಟ್ಹವೆಂದ ತಕ್ಷನ ಒಂದು ಕವಿತೆ ಹತ್ತು
ಜನರನ್ನು ಏಕಕಾಲದಲ್ಲಿ ಯೆಕರಿತಿಯಲ್ಲಿ ಒಂದೇ ಬಗೆಯಲ್ಲಿ ಪ್ರಭಾವ ಬೀರಬಹುದೆಂಬ ಒಂದು ಆಕರ್ಷಕ ಆದರೆ ನಿಜವಲ್ಲದ ಒಂದು
ಸಿದ್ಧಾನ್ತವೆ ರೂಪುಗೊಳ್ಳುತ್ತದೆ.ದೇಶದ ಸ್ವಾತಂತ್ರ ಸಂಗ್ರಾಮ,ಯುದ್ಧ ಪ್ರಸಂಗಗಳಲ್ಲಿ ಹುಟ್ಟುವ ವಿರಾವೇಷದ ಪದ್ಯಗಳು ,ಯಾವುದೋ ಚಳುವಳಿಯ ನೆಪದಲ್ಲಿ ಮೂಡುವ ಸಮೂಹ ಗೀತೆಗಳು,ರಾಷ್ಟ್ರಗೀತೆ,ನಾದಗೀತೆಗಳಂಥ ಸಾಂಕೇತಿಕ ರಚನೆಗಳು ಈ ಬಗೆಯ ಕಾವ್ಯ ತಿಳುವಳಿಕೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಆಯಾ ಸಂದರ್ಭದಲ್ಲಿ ಬೆಳೆಸಿಬಿಡುತ್ತವೆ ಇದರ ಪರಿಣಾಮದ ಅತಿಯಾದ ಪ್ರಭಾವ ಸಾಮೂಹಿಕವಾಗಿ ಬೆಳೆದಾಗ ಕವಿತೆಯಲ್ಲಿ ''ಸಾಮಾಜಿಕತೆ''''ರಾಜಕೀಯ ಪ್ರಜ್ಞೆ''   ಪರಿಸರ ಪ್ರಜ್ಞೆ''''ಜಾಗತೀಕರಣದ ಚಿಂತನೆ''ಇವೇಲ್ಲವೂ ಇರಲೇಬೇಕೆಂಬ ಒಂದು ಅಸಜ ಒತ್ತಾಯವೂ ಕವಿಗಳ ಮೇಲೆ ಬಿಳತೊಡಗುತ್ತದೆ .
ಈ ಒತ್ತಡವನ್ನು ತಪ್ಪಿ ಕವಿಯೂ ಗಂಭೀರವಾಗಿ ಸ್ವಿಕರಿಸಿ ಬಿಟ್ಟರೆ ಆಗ ಎಲ್ಲ ಕವಿಗಳೂ ಕವಿತೆಯ ಒಂದು ''ನಮೂನೆ''ಯನ್ನು ತುಂಬಿಕೊಡುವ ಕರನಿಕರಾಗಿಬಿದುತ್ತಾರೆ .ಆಗ ಈ ಬಗೆಯ ಯೆಕತಾನತೆಯೂ ಬೇಸರ ಹುಟ್ಟಿಸಿ ಪ್ರತಿಯೊಬ್ಬ ಕವಿಯ ಸೋಪಜ್ನತೆಯನ್ನು ಹುಡುಕುತ್ತ ಹೋಗುವದು ವಿಮರ್ಶೆಯ ಚಟವಾಗಿಬಿಡುತ್ತದೆ ಇಲ್ಲವೇ ಹಟವಾಗಿಬಿದುತ್ತದೆ .ಇಂಥ ಸಂಕ್ರಮನಾವಸ್ಥೆಯ ಸಂದರ್ಭದಲ್ಲಿ ನಿಜವಾದ ಕಾವ್ಯಕರ್ಮದಲ್ಲಿ ತೊಡಗಿದ ಕವಿ ಒಂದಿಷ್ಟು ಅಜ್ನಾತವಾಸವನ್ನೂ
ಅನುಭವಿಸಬೇಕಾಗುವದು ಕಾಲಸಜವಾದ ಧರ್ಮವೇ ಆಗಿದೆ.

No comments:

Post a Comment