Sunday, 27 November 2011

anudinaabhavaabdhiyalli....21

ಇದಕ್ಕೂ ಒಂದು ಉತ್ತರವನ್ನು ನಮ್ಮ ಹಿರಿಯರು ಕೊಡುತ್ತ ಬಂದಿದ್ದಾರೆ.ಒಬ್ಬ ವ್ಯಕ್ತಿ ತನ್ನ ಮಟ್ಟಿಗೆ ತಾನು ಮುಕ್ತಿ,ಮೊಕ್ಷ,ನಿರ್ವಾಣ,ಕೈವಲ್ಯ,ಏನೋ ಒಂದನ್ನು ಪಡೆದುಕೊಂಡ ಮೇಲೆ ಅವನಿಗೆ  ಲೋಕದ ಅನಂತ ದುಖಿಗಳ ಬಗೆಗೆ ಅನುಕಂಪ ಉಂಟಾಗಿ ಆತ ತನ್ನ ಪ್ರವಾಸ ಕಥನವನ್ನು ಇನ್ನೊಬ್ಬನಿಗು ತಿಳಿಸಲು ಯೋಚಿಸಿ ಕಾರ್ಯ ಪ್ರವ್ರತ್ತನಾಗುತ್ತಾನಂತೆ.ಆತನ ಪ್ರವಚನಗಳು,ಗ್ರಂಥಗಳು,ಎಲ್ಲವೂ ಇದೆ ಉದ್ದೇಶದ  ಸಂಕೇತಗಳು.ಹಾಗಾದರೆ ಆತ ಒಬ್ಬನೇ ತನ್ನದೇನು ಹೇಳುವದಿದೆಯೋ ಅದನ್ನು ಹೇಳಿ ಹೋಗಬಾರದೇಕೆ ಎಂಬ ಪ್ರಶ್ನೆಯೂ ಇದ್ದೆ ಇದೆ.
ನಮ್ಮ ಚರಿತ್ರೆ ತಿಳಿಸುವಂತೆ ಪ್ರತಿಯೊಬ್ಬ ಮೂಲ ಚಿಂತಕನೂ ಮೂಲದಲ್ಲಿ ಒಂಟಿಯಾಗಿಯೇ ಸಾಧಕನಾಗಿದ್ದ.ಆದರೆ ಮುಂದೆ ಬಂದ ಅವನ ಹಿಂಬಾಲಕರು ಗುಂಪು ಕಟ್ಟಿಕೊಂಡರು.ಈ ಗುಂಪು ಮೂಲಶಕ್ತಿಯನ್ನು ಅನೇಕ ಕಾರಣಗಳಿಗಾಗಿ ಕಳೆದುಕೊಳ್ಳುತ್ತದೆ.ಈ ಬಗೆಯ ಶಕ್ತಿ-ಸ್ರಾವವೂ ಕಾಲದ ಅನಿವಾರ್ಯ ಪರಿನಾಮವೆಂದೆ ಭಾವಿಸುವ ಒಂದು ವರ್ಗವೂ ನಿರಂತರವಾಗಿ ಈ ಅವಸರ್ಪಿನಿ ಪ್ರಕ್ರಿಯೆಗೆ ಪೂರಕವಾಗಿಯೆ ಕೆಲಸ ಮಾಡುತ್ತಿರುತ್ತದೆ.
ಇದರ ಇನ್ನೊಂದು ಪರಿಣಾಮದ ಬಗೆಗೂ ನಾವು ಇಲ್ಲಿಯೇ ಗಮನಿಸಬಹುದು.ತನ್ನ ಪಾಡಿಗೆ ತಾನು ಮುಕ್ತಿಯನ್ನು ಪಡೆದವನಕಿಂತ ಜಗತ್ತಿನ ಜೀವಗಳಿಗೂ ತನ್ನ ಆಲೋಚನೆಗಳನ್ನು ಬಿತ್ತುಕೊತ್ತವ ಬಹಳ ದೊಡ್ದವನೆಂಬ ಸುದ್ದಿಯೂ ತತ್ವಜ್ಞಾನದಲ್ಲಿ ಬಹಳ ಪ್ರಚಾರ ಪಡೆಯುತ್ತಾ ಬಂದಿದೆ.ಇದು ಹೊರಗೆ ನೋಡಲು ಬಹಳ ಸಹಜವಾಗಿಯೇ ಕಾಣುವ ಮಾತು.
ಆದರೆ ಇದರ ಹಿಂದೆ ಒಂದು ಅಗೋಚರ ಮನೋವೈಜ್ಞಾನಿಕ ಕಾರಣವೂ ಇರಬಹುದಾಗಿದೆ.

No comments:

Post a Comment