Friday, 4 November 2011

ಅನುದಿನ ಭವಾಬ್ಧಿಯಲ್ಲಿ .. ೨

ಪ್ರಾಣಿಗಳಲ್ಲಿ ಅವುಗಳ ಜೀವಂತಿಕೆಯ ಮುಖ್ಯ ಗುನಲಕ್ಷನವೆನ್ದರೆ ಅವುಗಳ ಭಾಷೆ ಎಂದೇ ಹೇಳಬೇಕು.ಎಲ್ಲ ಪ್ರಾಣಿಗಳಿಗೂ ಅವುಗಳದೇ ಆದ ಭಾಷಇದೆ.ಇನ್ನುಳಿದ ಪ್ರಾಣಿಗಳ ಭಾಷೆ ಮನುಷ್ಯನಿಗೆ ಸಂಪೂರ್ಣವಾಗಿ ಅರ್ಥವಾಗಲಾದೇನೋ.ಆದರೆ ಮನುಷ್ಯನಿಗೆ ಅವನದೇ ಆದ ಭಾಷೆಯ ಅಗತ್ಯ ಅನಾದಿ ಕಾಲದಿಂದಲೂ ಇದ್ದಇದೆ.ಆತ ತನ್ನ ಅವಶ್ಯಕತೆಗೆತಕ್ಕಂತೆ ಅದನ್ನು ರೂಪಿಸಿಗೊಲ್ಲುತ್ತಲು ಬಂದಿದ್ದಾನೆ.
ಆದರೆ ಭಾಷೆಯ ಅನುಸಂಧಾನ ಮನುಷ್ಯನಿಗೆ ಮೂಲದಲ್ಲಿ ಅಗತ್ಯವಾಗಿ ಕಂಡಿದ್ದರೂ ನಂತರ ಕಾಲಕ್ರಮೇಣ ಅದು ಅವನ ಆಶೆಯಾಗಿಯು ಮನಗಂಡಿದೆ.ಆದ್ದರಿಂದ ಭಾಷೆ ಮನುಷ್ಯನಿಗೆ ಅಗತ್ಯವಾಗಿ ಕಂಡಾಗ ಅದು ತಳೆಯುವ ರೂಪಕ್ಕೂ ಅದು ಅವನ ಅಶೆಯಾದಾಗ ತಳೆಯುವ ರೂಪಕ್ಕೂ ಒಂದು ಅಂತರ ಇದ್ದಇರುತ್ತದೆ.
ಹಾಗಾದರೆ ಅವನಿಗೆ ಯಾಕೆ ಭಾಷೆಯ ಅಗತ್ಯವೂ ಭಾಷೆಯ ಆಶೆಯಾಗಿ ಬೆಳಯಿತು ಎಂಬುದು ಎಲ್ಲ ಭಾಶಾಶಾಸ್ತ್ರಗಲೂ ಎತ್ತಿಕೊಂಡ ಪ್ರಶ್ನೆಯೇ ಆಗಿದೆ.ಮನುಷ್ಯನಿಗೆ ಭಾಷೆ ಮುಖ್ಯವಾಗಿ ಎರಡು ಕಾರಣಗಳಿಗಾಗಿ ಬೇಕಾಗಿದೆ ಎಂಬುದನ್ನು ನಮ್ಮ ಶಾಸ್ತ್ರಕಾರರು ಈ ಮೊದಲೇ ಗುರುತಿಸಿದ್ದಾರೆ.ಒಂದೆಂದರೆ ಅವನ ಅನುದಿನದ ತೀರ ಸಣ್ಣಸಣ್ಣ ,ವ್ಯವಹಾರಿಕ ,ಅಲ್ಪಕಾಲಿಕ ,ವಿಷಯಗಳ ಸಂವಹನಕ್ಕಾಗಿ.ಇನ್ನೊಂದು ಒಂದು ವಿಷಯವನ್ನು ತರ್ಕಬದ್ಧವಾಗಿ ಸಂವಹನಗೊಳಿಸಲು ಆತ ಭಾಷೆಯನ್ನೂ ಬಳಸಲೇಬೀಕಾಗುತ್ತದೆ ಬಹುಷಃ ಎರಡನೆಯ ಬಗೆಯ ಬಳಕೆಯೇ ಭಾಷೆಯ ಚರಿತ್ರೆಯನ್ನು ರೂಪಿಸುವ ಮುಖ್ಯ ಘಟಕವಾಗಿದೆ.
ಹಾಗಾದರೆ ಭಾಷೆಯಲ್ಲಿ ಕವಿತೆ ಬರೆಯುವ ಕವಿಯ ಹೊಕ್ಕು-ಬಳಕೆಯನ್ನು ಏನೆಂದು ವ್ಯಾಖ್ಯಾನಿಸಬೀಕು ಎನ್ನುವದು ಕಾವ್ಯ 
ಮಿಮಾಂಸಕರನ್ನು ಸಾಕಷ್ಟು ಕಾದಿದ್ದೂ ಇದೆ.
ಈ ಅರ್ಥದಲ್ಲಿ ನಾವೀಗ ಒಬ್ಬ ಮನುಷ್ಯನಿಗೆ ತನ್ನ ಭಾಷೆಯನ್ನೂ ಕಾವ್ಯಭಾಷೆಯನ್ನಾಗಿ ಪರಿವರ್ತಿಸಿಗೊಳಲೆಬೇಕಾದ ಅವಶ್ಯಕತೆ 
ಯಾಕೆ ಬರುತ್ತದೆ ಎಂಬುದನ್ನು ಕುರಿತು ಆಲೋಚನೆಗಳನ್ನು ಮುಂದುವರೆಸಬಹುದು.

No comments:

Post a Comment