Thursday, 10 November 2011

ಅನುದಿನ ಭವಾಬ್ಧಿಯಲ್ಲಿ ..೮

ಮೊದಲನೆಯದಾಗಿ ನಾವು ಇಲ್ಲಿ ಒಂದು ವಿಚಿತ್ರವನ್ನು ಗಮನಿಸಬಹುದು.ನಿಜವಾಗಿಯೂ ಚಂದ್ರನಿಗೂ ಈ ಹುಡುಗಿಯ ಮುಖಕ್ಕೂ
ಯಾವುದೇ ತಾರ್ಕಿಕ ಅಥವಾ ವೈಜ್ಞಾನಿಕ ಸಂಬಂಧವಿಲ್ಲ.ಹಾಗೆ ನೋಡಿದರೆ ಇದು ಅಸಂಬದ್ಧ ಕೂಡಾ.ಆದರೆ ನಾವು ಆ ಪರಿಭಾಷೆಯನ್ನು ಬಳಸುತ್ತೇವೆ.ನಮಗೆ ಈ ಭಾಷೆಯ ಹಿಂದಿನ ಲೋಕಸತ್ಯದ ಬಗೆಗೆ  ಗೊತ್ತಿದ್ದೂ ನಾವು ಈ ಭಾಷೆಯನ್ನೂ
ಬಳಸುತ್ತೇವೆ.ನಮಗೆ ಈ ಬಗೆಗೆ ಸಂಕೋಚವೂ ಇರುವದಿಲ್ಲ,ಸಂಶಯವೂ ಇರುವದಿಲ್ಲ.ಅದರ ಬದಲು ಒಮ್ಮೊಮ್ಮೆ ಸಂತೋಷವೇ ಆದೀತು.ನಾನು ಹೇಳಬೇನ್ದಿರುವ ಭಾವಕ್ಕೆ ತಕ್ಕ ಭಾಷೆ ಸಿಕ್ಕಾಗ ಆದ ಸಂತೋಷವದು.ಅಂದರೆ ಈ ಬಗೆಯ ಭಾಷೆಯ ಬಳಕೆಯಲ್ಲಿ ನಾವು ಅದರ ಈ ಪೂರ್ವದ ಅರ್ಥವನ್ನು ಹೊರತೆಗೆದು ,ಅದನ್ನು ಖಾಲಿ ಮಾಡಿ ,ಅಲ್ಲಿ ಬೇರೊಂದೇ ಅರ್ಥವನ್ನು ತುಮ್ಬುತ್ತಿರುತ್ತೇವೆ
ಯೆನ್ದನ್ತಾಇತು ಅಂದರೆ ಈ ಬಗೆಯ ಭಾಷೆಯನ್ನೂ ಸ್ರಷ್ಟಿಸುವವರಿಗೆ ಎರಡು ಕಲೆಗಳು ಗೊತ್ತಿರಬೇಕು.ಒಂದದೆನ್ದರೆ ಮೊದಲು ಭಾಷೆಗೆ ಈ ಮೊದಲು ಇರುವ ಅರ್ಥವನ್ನು ಹೊರಕಳಿಸಿ ಅದನ್ನು ಖಾಲಿ ಮಾಡುವದು ಹಾಗೂ ತನ್ನ ಅಗತ್ಯಕ್ಕೆ ತಕ್ಕುದಾದ ಅರ್ಥವೂ ಅದರಲ್ಲಿ ಹುಟ್ಟುವಂತೆ ಅವಶ್ಯವಿರುವ ಅರ್ಥವನ್ನು ಅದರಲ್ಲಿ ತುಂಬುವದು .ಈ ಕಲೆಯಲ್ಲಿ ಪಳಗಿದವನನ್ನೇ ನಾವು ದೊಡ್ಡ ಶಕ್ತಿಯ ಕವಿಯೆಂದು ಗುರುತಿಸುತ್ತೇವೆ.
ಭಾಷೆಯಲ್ಲಿನ ನಿಗದಿತ ಅರ್ಥವನ್ನು ಖಾಲಿ ಮಾಡುವ ಕೆಲಸವೂ ಅಷ್ಟೇನು ಸುಲಭದ ಕೆಲಸವಲ್ಲ.ಆ ಕೆಲಸವನ್ನು ಮಾಡಲು ತೊಡಗಿದಾಗಲೇ ಅದರ ಅನುಭವ ಆಗುವನ್ಥಹದು.ನಾವು ನಿತ್ಯವೂ ಭಾಷೆಯ ಈ ನಿಗದಿತ ಅರ್ಥದೊಂದಿಗೆ ಎಷ್ಟು ಹೊಂದಿಕೊಂಡು ಬಿಟಿರುತ್ತೆವೆಂದರೆ ನಮಗೆ ಒಂದೇ ಒಂದು ಶಬ್ದಕೂ ಪ್ರತಿ ಶಬ್ದ ಸಿಕ್ಕುವದು ಕಠಿಣ.ನಾವು ನಿತ್ಯವೂ ನಮ್ಮ
ಎಲ್ಲ ಭಾಷೆಯ ಅಗತ್ಯಗಳನ್ನೂ ಹೀಗೆ ನಮ್ಮ ನಮ್ಮ ಬಡತನದಲ್ಲೇ ಕಳೆಯುತ್ತಿರುತ್ತೇವೆ.ಬಾಳಿನ 'ಅರ್ಥ-ಬಡತನಕ್ಕಿಂತ'
ಮನುಷ್ಯನ ಈ ಬಗೆಯ ಭಾವಕ್ಕಗತ್ಯವಾದ ಭಾಷೆ ಇಲ್ಲದ ಬಡತನ ಒಂದು ಜನಾಂಗದ ನಿಜವಾದ ಸಾಂಸ್ಕ್ರತಿಕ ಬಡತನ
ಎನ್ನಬೇಕು.ಇದು ಬಹಳ ಅಪಾಯಕಾರಿ ಕೂಡಾ .ಈ ಅಪಾಯವನ್ನು ಗುರುತಿಸಲಾಗದ,ಗುರುತಿಸಿಯೂ ನಿರ್ಲಕ್ಷಿಸುವ
ಜನಾಂಗವು ರೋಗಗ್ರಸ್ತ ಜನಾಂಗವೂ ಆಗಿರುತ್ತದೆ.

No comments:

Post a Comment