Wednesday, 16 November 2011

anudinaabhavaabdhiyalli....11

ಹಾಗಾದರೆ ಈ ಬರೆಯುವ ಹಾಗು ಓದುವ ವರ್ಗಗಳ ಜೀವನದ ಸಮಸ್ಯೆಗಳು ಬರಹದ ಅಭಿವ್ಯಕ್ತಿಯ ಹಾಗು ಅದರ ಆಸ್ವಾದನೆಯ 
ಸಮಸ್ಯೆಗಳಾಗಿ ಹೇಗೆ ಪ್ರಕಟಗೊಳ್ಳುತ್ತವೆ ಎಂಬುದು ಸಾಹಿತ್ಯ ಲೋಕದ ನಿರಂತರ ಚಿಂತನೆಯಾಗಿದೆ.
ಸಾಮಾನ್ಯವಾಗಿ ನಾವು ಈ ಇಡಿ ಆಲೋಚನೆಯನ್ನು ಗಮನಿಸುತ್ತ ಬಂದ ಬಗೆ ಹೀಗಿದೆ..ಮನುಷ್ಯನ ಬದುಕಿನಲ್ಲಿನ ಎಲ್ಲ ಬಗೆಯ 
ಭಾವಸ್ಥಿತಿಗಳನ್ನು ನಾವು ಸುಖ ಹಾಗು ದುಖವೆಂಬ ಎರಡೆ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದೇವೆ.ಬೇಸರ,ಸಿಟ್ಟು,ದ್ವೇಷ,ಉದಾಸಿನತೆ ಇಂಥ ಹಲವು ವೈವಿಧ್ಯಮಯ ಭಾವಗಳನ್ನೂ ನಾವು ಈ ಎರಡು ವಿಭಾಗಗಳಲ್ಲೇ ವಿಂಗಡಿಸಿ ಕೊಂಡಿದ್ದೇವೆ.ಶಬ್ದ ರೂಪಿ ಆಕ್ರತಿಯಲ್ಲಿ ಅವು ಎಲ್ಲವೂ ಬಿಡಿಬಿಡಿಯಾಗಿಯೇ ಸ್ಪಷ್ಟವಾಗಿ ನಮಗೆ ಅನುಭವಕ್ಕೆ ಬರುತಿದ್ದರೂ ಅವುಗಳ ಒಟ್ಟು ಸ್ವರೂಪಗಲನ್ನು ನಾವು ತಾತ್ವಿಕವಾಗಿ ಆ ಎರಡೆ ವಿಭಾಗಗಳಲ್ಲಿ ಗುರುತಿಸಿದ್ದೇವೆ.ಇವುಗಳನ್ನು ಬೇಕೆಂದರೆ ಅನುಭವಗಳ ಸ್ವರೂಪದ ಸ್ಥಾಯಿ ಹಾಗು ಸಂಚಾರಿ ರೂಪಗಲೆನ್ದು ನಾವು ತಿಳಿಯಬಹುದು.
ಅನುಭವದ ಸ್ರಜನ ಕಾಲದಲ್ಲಿ ಕವಿಯ ಗಮನಿಕೆಯು ಆಯಾ ಅನುಭವದ ಸಂಚಾರಿ ವಿವರಗಳ ಮೇಲೆಯೇ ಕೆನ್ದ್ರಿಕ್ರತವಾಗಿದ್ದರೂ ಅವು ಒಟ್ಟಾರೆಯಾಗಿ ಕೊಡುವ ಅನುಭವದ ತಾತ್ವಿಕ ಸ್ವರೂಪವು ಬದುಕಿನ ತಾತ್ವಿಕ ಸ್ವರೂಪವನ್ನು ಗ್ರಹಿಸಲು ನಮಗೆ ಉಪಯುಕ್ತವಾಗುವದು ಅದರ ಸ್ಥಾಯಿ ಸ್ವರೂಪವೇ.

No comments:

Post a Comment