ಎಲ್ಲ ಮತ,ಪಂಥಗಳಲ್ಲಿಯೂ ನಾವು ಈ ಬಗೆಯ ಎರಡು ತರಹದ ಸಾಧಕರನ್ನು ಕಾಣುತ್ತೇವೆ.ಆದರೆ ಎಲ್ಲ ಕಡೆಗೂ ಸಾರ್ವಜನಿಕ ಪ್ರಚಾರಕ್ಕೆ ಬಾರದೆ ತಮ್ಮದೇ ಆದ ಅಂತರಂಗದ ಜಗತ್ತಿನಲ್ಲಿಯೇ ಧನ್ಯತೆಯನ್ನು ಕಂಡವರು ಅಲ್ಪಸಂಖ್ಯಾಕರೆ ಆಗಿದ್ದಾರೆ .ಒಂದು ಗುಂಪು ಕಟ್ಟಿಕೊಂಡು ,ತನ್ಮೂಲಕ ತಮ್ಮ ಮತದ ಪ್ರಸಾರಕ್ಕೆ ಒಂದು ಸಮೂಹವನ್ನು ನೆಚ್ಚುವದು ಬಹಳ ಜನ ಸಾಧಕರ ಅನಿವಾರ್ಯ ಕ್ರಿಯೆಯೇ ಆಗಿದೆ.ಇದರ ಹಿಂದೆ ಎಷ್ಟೇ ಒಳ್ಳೆಯ ಉದ್ದೇಶವಿದ್ದರೂ ಕಾಲದ ಒಟ್ಟೂ ನಡಿಗೆಯಲ್ಲಿ ಈ ಪ್ರಕ್ರಿಯೆ ಹಲವು
ಸಮಷ್ಯೆಗಳನ್ನು ಸ್ರಷ್ಟಿಸಿದ್ದು ಸ್ಪಷ್ಟವಾಗಿಯೇ ಇದೆ.
ಮಾಧ್ವ ಪರಂಪರೆಯಲ್ಲೂ ಈ ಬಗೆಯ ಬಿಡಿ ಸನ್ಯಾಸಿಗಳು,ತಪೋ ನಿರತರು ಹಲವರಿದ್ದಾರೆ.ಇವರ ಬಗೆಗೆ ಪೀಠವೇರಿದ ಯತಿಗಳ ಬಗೆಗೆ ಬಂದಂತೆ ಯಾವುದೇ ''ವಿಜಯ-ಕಾವ್ಯ''ವು ಬಂದಿಲ್ಲ ವೆನ್ನುವದು ನಮಗೆ ಈ ಇಡಿ ಚಾರಿತ್ರಿಕ ಸತ್ಯದ ಬಗೆಗೆ ಮತ್ತೆ ಬೇರೆ ಕೆಲವು ವಿಷಯಗಳನ್ನು ತಿಳಿಸುತ್ತಿರುವಂತೆ ಕಾಣುತ್ತದೆ.
ಚರಿತ್ರೆಯಲ್ಲಿ ತಾನು ,ತನ್ನ ಧರ್ಮ ಸ್ಥಾಪಿತ ವಾಗಬೇಕೆಂಬ ಆಲೋಚನೆ ಇಲ್ಲದೆ ಶುದ್ಧಾನ್ಗವಾಗಿ ಒಬ್ಬ ವ್ಯಕ್ತಿ ಸಮೂಹದಲ್ಲಿ ನೇತಾರನಾಗಿ ನಿಲ್ಲುವ ಯೋಚನೆ ಮಾಡಿದ್ದನೆಮ್ಬುದೆ ನಂಬಲು ಬಹಳ ಕಷ್ಟದ ವಿಷಯ.
ಸಮಷ್ಯೆಗಳನ್ನು ಸ್ರಷ್ಟಿಸಿದ್ದು ಸ್ಪಷ್ಟವಾಗಿಯೇ ಇದೆ.
ಮಾಧ್ವ ಪರಂಪರೆಯಲ್ಲೂ ಈ ಬಗೆಯ ಬಿಡಿ ಸನ್ಯಾಸಿಗಳು,ತಪೋ ನಿರತರು ಹಲವರಿದ್ದಾರೆ.ಇವರ ಬಗೆಗೆ ಪೀಠವೇರಿದ ಯತಿಗಳ ಬಗೆಗೆ ಬಂದಂತೆ ಯಾವುದೇ ''ವಿಜಯ-ಕಾವ್ಯ''ವು ಬಂದಿಲ್ಲ ವೆನ್ನುವದು ನಮಗೆ ಈ ಇಡಿ ಚಾರಿತ್ರಿಕ ಸತ್ಯದ ಬಗೆಗೆ ಮತ್ತೆ ಬೇರೆ ಕೆಲವು ವಿಷಯಗಳನ್ನು ತಿಳಿಸುತ್ತಿರುವಂತೆ ಕಾಣುತ್ತದೆ.
ಚರಿತ್ರೆಯಲ್ಲಿ ತಾನು ,ತನ್ನ ಧರ್ಮ ಸ್ಥಾಪಿತ ವಾಗಬೇಕೆಂಬ ಆಲೋಚನೆ ಇಲ್ಲದೆ ಶುದ್ಧಾನ್ಗವಾಗಿ ಒಬ್ಬ ವ್ಯಕ್ತಿ ಸಮೂಹದಲ್ಲಿ ನೇತಾರನಾಗಿ ನಿಲ್ಲುವ ಯೋಚನೆ ಮಾಡಿದ್ದನೆಮ್ಬುದೆ ನಂಬಲು ಬಹಳ ಕಷ್ಟದ ವಿಷಯ.