Wednesday, 30 November 2011

anudinaabhavaabdhiyalli....21

ಎಲ್ಲ ಮತ,ಪಂಥಗಳಲ್ಲಿಯೂ ನಾವು ಈ ಬಗೆಯ ಎರಡು ತರಹದ ಸಾಧಕರನ್ನು ಕಾಣುತ್ತೇವೆ.ಆದರೆ ಎಲ್ಲ ಕಡೆಗೂ ಸಾರ್ವಜನಿಕ ಪ್ರಚಾರಕ್ಕೆ  ಬಾರದೆ ತಮ್ಮದೇ ಆದ ಅಂತರಂಗದ ಜಗತ್ತಿನಲ್ಲಿಯೇ ಧನ್ಯತೆಯನ್ನು ಕಂಡವರು ಅಲ್ಪಸಂಖ್ಯಾಕರೆ ಆಗಿದ್ದಾರೆ .ಒಂದು ಗುಂಪು ಕಟ್ಟಿಕೊಂಡು ,ತನ್ಮೂಲಕ ತಮ್ಮ ಮತದ ಪ್ರಸಾರಕ್ಕೆ ಒಂದು ಸಮೂಹವನ್ನು ನೆಚ್ಚುವದು ಬಹಳ ಜನ ಸಾಧಕರ ಅನಿವಾರ್ಯ ಕ್ರಿಯೆಯೇ ಆಗಿದೆ.ಇದರ ಹಿಂದೆ ಎಷ್ಟೇ  ಒಳ್ಳೆಯ ಉದ್ದೇಶವಿದ್ದರೂ ಕಾಲದ ಒಟ್ಟೂ ನಡಿಗೆಯಲ್ಲಿ ಈ ಪ್ರಕ್ರಿಯೆ ಹಲವು
ಸಮಷ್ಯೆಗಳನ್ನು ಸ್ರಷ್ಟಿಸಿದ್ದು ಸ್ಪಷ್ಟವಾಗಿಯೇ ಇದೆ.

ಮಾಧ್ವ ಪರಂಪರೆಯಲ್ಲೂ ಈ ಬಗೆಯ ಬಿಡಿ ಸನ್ಯಾಸಿಗಳು,ತಪೋ ನಿರತರು ಹಲವರಿದ್ದಾರೆ.ಇವರ ಬಗೆಗೆ ಪೀಠವೇರಿದ ಯತಿಗಳ ಬಗೆಗೆ ಬಂದಂತೆ ಯಾವುದೇ ''ವಿಜಯ-ಕಾವ್ಯ''ವು ಬಂದಿಲ್ಲ ವೆನ್ನುವದು ನಮಗೆ ಈ ಇಡಿ ಚಾರಿತ್ರಿಕ ಸತ್ಯದ ಬಗೆಗೆ ಮತ್ತೆ ಬೇರೆ ಕೆಲವು ವಿಷಯಗಳನ್ನು ತಿಳಿಸುತ್ತಿರುವಂತೆ ಕಾಣುತ್ತದೆ.
ಚರಿತ್ರೆಯಲ್ಲಿ ತಾನು ,ತನ್ನ ಧರ್ಮ ಸ್ಥಾಪಿತ ವಾಗಬೇಕೆಂಬ ಆಲೋಚನೆ ಇಲ್ಲದೆ ಶುದ್ಧಾನ್ಗವಾಗಿ ಒಬ್ಬ ವ್ಯಕ್ತಿ ಸಮೂಹದಲ್ಲಿ ನೇತಾರನಾಗಿ ನಿಲ್ಲುವ ಯೋಚನೆ ಮಾಡಿದ್ದನೆಮ್ಬುದೆ ನಂಬಲು ಬಹಳ ಕಷ್ಟದ ವಿಷಯ.

Sunday, 27 November 2011

anudinaabhavaabdhiyalli....21

ಇದಕ್ಕೂ ಒಂದು ಉತ್ತರವನ್ನು ನಮ್ಮ ಹಿರಿಯರು ಕೊಡುತ್ತ ಬಂದಿದ್ದಾರೆ.ಒಬ್ಬ ವ್ಯಕ್ತಿ ತನ್ನ ಮಟ್ಟಿಗೆ ತಾನು ಮುಕ್ತಿ,ಮೊಕ್ಷ,ನಿರ್ವಾಣ,ಕೈವಲ್ಯ,ಏನೋ ಒಂದನ್ನು ಪಡೆದುಕೊಂಡ ಮೇಲೆ ಅವನಿಗೆ  ಲೋಕದ ಅನಂತ ದುಖಿಗಳ ಬಗೆಗೆ ಅನುಕಂಪ ಉಂಟಾಗಿ ಆತ ತನ್ನ ಪ್ರವಾಸ ಕಥನವನ್ನು ಇನ್ನೊಬ್ಬನಿಗು ತಿಳಿಸಲು ಯೋಚಿಸಿ ಕಾರ್ಯ ಪ್ರವ್ರತ್ತನಾಗುತ್ತಾನಂತೆ.ಆತನ ಪ್ರವಚನಗಳು,ಗ್ರಂಥಗಳು,ಎಲ್ಲವೂ ಇದೆ ಉದ್ದೇಶದ  ಸಂಕೇತಗಳು.ಹಾಗಾದರೆ ಆತ ಒಬ್ಬನೇ ತನ್ನದೇನು ಹೇಳುವದಿದೆಯೋ ಅದನ್ನು ಹೇಳಿ ಹೋಗಬಾರದೇಕೆ ಎಂಬ ಪ್ರಶ್ನೆಯೂ ಇದ್ದೆ ಇದೆ.
ನಮ್ಮ ಚರಿತ್ರೆ ತಿಳಿಸುವಂತೆ ಪ್ರತಿಯೊಬ್ಬ ಮೂಲ ಚಿಂತಕನೂ ಮೂಲದಲ್ಲಿ ಒಂಟಿಯಾಗಿಯೇ ಸಾಧಕನಾಗಿದ್ದ.ಆದರೆ ಮುಂದೆ ಬಂದ ಅವನ ಹಿಂಬಾಲಕರು ಗುಂಪು ಕಟ್ಟಿಕೊಂಡರು.ಈ ಗುಂಪು ಮೂಲಶಕ್ತಿಯನ್ನು ಅನೇಕ ಕಾರಣಗಳಿಗಾಗಿ ಕಳೆದುಕೊಳ್ಳುತ್ತದೆ.ಈ ಬಗೆಯ ಶಕ್ತಿ-ಸ್ರಾವವೂ ಕಾಲದ ಅನಿವಾರ್ಯ ಪರಿನಾಮವೆಂದೆ ಭಾವಿಸುವ ಒಂದು ವರ್ಗವೂ ನಿರಂತರವಾಗಿ ಈ ಅವಸರ್ಪಿನಿ ಪ್ರಕ್ರಿಯೆಗೆ ಪೂರಕವಾಗಿಯೆ ಕೆಲಸ ಮಾಡುತ್ತಿರುತ್ತದೆ.
ಇದರ ಇನ್ನೊಂದು ಪರಿಣಾಮದ ಬಗೆಗೂ ನಾವು ಇಲ್ಲಿಯೇ ಗಮನಿಸಬಹುದು.ತನ್ನ ಪಾಡಿಗೆ ತಾನು ಮುಕ್ತಿಯನ್ನು ಪಡೆದವನಕಿಂತ ಜಗತ್ತಿನ ಜೀವಗಳಿಗೂ ತನ್ನ ಆಲೋಚನೆಗಳನ್ನು ಬಿತ್ತುಕೊತ್ತವ ಬಹಳ ದೊಡ್ದವನೆಂಬ ಸುದ್ದಿಯೂ ತತ್ವಜ್ಞಾನದಲ್ಲಿ ಬಹಳ ಪ್ರಚಾರ ಪಡೆಯುತ್ತಾ ಬಂದಿದೆ.ಇದು ಹೊರಗೆ ನೋಡಲು ಬಹಳ ಸಹಜವಾಗಿಯೇ ಕಾಣುವ ಮಾತು.
ಆದರೆ ಇದರ ಹಿಂದೆ ಒಂದು ಅಗೋಚರ ಮನೋವೈಜ್ಞಾನಿಕ ಕಾರಣವೂ ಇರಬಹುದಾಗಿದೆ.

Saturday, 26 November 2011

anudinaabhavaabdhiyalli....20

ಈ ಸಂದರ್ಭದ ಒಟ್ಟು ಮುಖ್ಯ ಬಿಂದು ಇರುವದು ನಮ್ಮ ಹೊರ-ಒಳಗಿನ ಅಸ್ತಿತ್ವಗಳ ಅವಶ್ಯಕತೆಗಳನ್ನು ಪುರೈಸಿಕೊಳ್ಳುವಲ್ಲಿ ನಾವು
ತೆಗೆದುಕೊಳ್ಳುವ ತಿರ್ಮಾನಗಳಲ್ಲಿ ಇದೆ.ಅಂದರೆ ಬರಿ ಹೊರಗನ್ನು ಲಕ್ಷಿಸುವದು ಅಥವಾ ಬರಿ ಒಳಗನ್ನು ಲಕ್ಷಿಸುವದು ಈ ಎರಡು ಅಪಾಯಗಳಿಂದ ನಾವು ಪಾರಾದಾಗಲೇ ಈ ಬಗೆಗೆ ನಾವು ಒಂದು ಸಾವಧಾನಿಕ ನಿಲುವನ್ನು ತೆಗೆದುಕೊಳ್ಳುವದು ಸಾಧ್ಯವಿದೆ.
ಆದರೆ ತತ್ವಜ್ಞಾನದ ಚರಿತ್ರೆ ಈ ಬಗೆಯ ಸಮಚಿತ್ತದ ಆವಿಷ್ಕಾರವು ಎಷ್ಟು ಕಷ್ಟ ಎಂಬುದನ್ನೇ ಮತ್ತೆ ಮತ್ತೆ ಒತ್ತಿ ಹೇಳುವಂತಿದೆ.ಇಷ್ಟೇ ಏಕೆ ಇಂತಹ ಆರೋಗ್ಯಪೂರ್ಣ ಚಿಂತನೆಯ ಅಲಭ್ಯತಇನ್ದಾಗಿಯೇ ಜಗತ್ತಿನಲ್ಲಿ ನಡೆದ ಹಿಂಸಾತ್ಮಕ ಸಂಘರ್ಷಗಳ ಒಂದು ದೊಡ್ಡ
ಚಿತ್ರಪ್ರದರ್ಷನವನ್ನೇ ನಾವು ಯಾವುದೇ ದೇಶದ ಚರಿತ್ರೆಯಲ್ಲೂ ಧ್ಹಾಲವಾಗಿ ಗಮನಿಸಬಹುದು.
ಇದಕ್ಕೊಂದು ಕಾರಣ ಮಿಮಾನ್ಶೆಯನ್ನೂ ಕೆಲವ ಪಂಥಗಳು ಕೊಡುತ್ತವೆ.ಅವು ಹೇಳುವದೆನೆಂದರೆ ಧರ್ಮವು ವ್ಯಕ್ತಿಗತ ಅನುಭವದ
ಸ್ವರೂಪದಲ್ಲಿ ಶುದ್ಧವಾಗಿಯೇ ಇರುತ್ತದೆ ಆದರೆ ಅದು ಸಾಂಸ್ಥಿಕ ರೂಪ ತೂಟ್ಟಾಗ ಅದರ ಮೂಲಶುದ್ಧಿಯು ನಾಶವಾಗುತ್ತದೆ .ಹಾಗಾದರೆ ಧರ್ಮವು ಸಾಂಸ್ಥಿಕ ರುಪವನ್ನಾದರು ಏಕೆ ತೊಡಬೇಕು?ಎಂಬುದು ಒಂದು ಇನ್ನುಂದು ಸಮಸ್ಯೆ ಆಗುತ್ತದೆ.ಒಟ್ಟಾರೆ ಮನುಷ್ಯನ ಸಾಮೂಹಿಕ ಅಸ್ತಿತ್ವ ಹಾಗೂ ಅವನ ವ್ಯಕ್ತಿಗತ ಅಸ್ತಿತ್ವಗಳು ಧರ್ಮದ ಸಾಮೂಹಿಕ ಹಾಗು ವ್ಯಕ್ತಿಗತ ಅಸ್ತಿತ್ವಗಳ ವ್ಯವಸ್ಥಾಪನೆಯಲ್ಲಿ ಅನಾದಿ ಕಾಲದಿಂದಲೂ ಹಲವು ಪ್ರಶ್ನೆಗಳನ್ನು ಎದುರಿಸುತ್ತಲೇ ಬಂದಿವೆ 

Friday, 25 November 2011

anudinaabhavaabdhiyalli....19

ಈ ಬಗೆಯ ಅತಿ ನಿಷ್ಟುರವಾದ ಬಿಡಿತನದ ನಂಬಿಕೆಯು ಎರಡು  ಮುಖ್ಯ ಪರಿಣಾಮಗಳನ್ನು ನಮ್ಮ ನೋಟಗಳಿಗೆ ತರುತ್ತದೆ.ಒಂದೆಂದರೆ ಅದು ಮನುಷ್ಯನ ಸಮೂಹದ ಒಳಗಿನ ಅಸ್ತಿತ್ವವನ್ನು ಮಿರಬೇಕಾದ ,ಇಲ್ಲವೇ ದಾಟಬೇಕಾದ,ಅಥವಾ ಹೇಗಾದರೂ ಮಾಡಿ ಬಿಡಿಸಿಕೊಂಡು ಹೊರಬರಬೇಕಾದ ಬಂಧನವನ್ನಾಗಿ ಪರಿಭಾವಿಸುತ್ತದೆ.ಅಂದರೆ ಲೋಕಜಿವನದ ನಮ್ಮ ಎಲ್ಲ ಅಂಟಿನ ನಂಟುಗಳು ಕ್ರಮೇಣ ಅವುಗಳಿಂದ ಬಿಡಿಸಿಕೊಂಡು ಹೊರ ಬರಬೇಕಾದ ''ಗಂಟು'' ಗಳೇ ಆಗಿವೆ.ಆದರೆ ಏನಿದ್ದರು ಮನುಷ್ಯನಿಗೆ ಸಾಮೂಹಿಕ ಅಸ್ತಿತ್ವದ ಹಂಗು ಬಿಟ್ಟದ್ದಲ್ಲ .ಅವನಿಗೆ ನಿತ್ಯ ಬೇಕಾಗುವ ಸುಖ,ಸೌಕರ್ಯ,ಸುರಕ್ಷಿತತೆ,ಇವುಗಳಿಗಾಗಿ ಆತ ತನ್ನ ಪಕ್ಕದ ಅಥವಾ ತನಗೆ ಪರಿಚಯವೇ ಇರದ ಹಲವಾರು ಮನುಷ್ಯರ ಮತ್ತು ಮನುಷ್ಯ ವ್ಯವಸ್ಥೆಗಳ ದಾಸನಾಗಿಯೇ ಬದುಕಬೇಕಾಗುವದು ಅನಿವಾರ್ಯವಾದ ಕ್ರಿಯೆ ಆಗಿದೆ.ಲೋಕದ ನಂಟುಗಳನ್ನು ಬಂಧನವೆಂದು ಬಿಂಬಿಸುವ ವಕ್ತಾರರೂ ತಮಗೆ ಅನಿವಾರ್ಯ ಇದ್ದಸ್ತಾದರು ಈ ಲೋಕಬಂಧದ ಮೇಲೆ ಅವಲಂಬಿತರೆ.ಎಲ್ಲ ಧಾರ್ಮಿಕ ಅಸ್ರದ್ಧೆಗಳ ಮೂಲವು ಇಲ್ಲಿಯೇ ಇದೆ ಎನ್ನಿಸುತ್ತದೆ.ಒಂದೆಡೆ ಲೋಕಬಂಧದಿಂದ ಹೊರಬರಬೇಕೆಂಬ ಹೇಳಿಕೆ ,ಇನ್ನೊಂದೆಡೆ ಅದರ ವ್ಯಾಪ್ತಿ ಪ್ರದೇಶದ ಹೊರಗೆ ಕಾಲಿಡುವದು ಆ ಬಗೆಯ ವಕ್ತಾರರಿಗೂ ಸಾಧ್ಯವಿಲ್ಲದ ವಾಸ್ತವ ಇವುಗಳಿಂದಾಗಿಯೇ ಧಾರ್ಮಿಕ ವ್ಯಕ್ತಿತ್ವಗಳು ಸುಳ್ಳು ಹೇಳುತ್ತಿವೆ,ಜಗತ್ತನ್ನು ಮೊಸಗೊಳಿಸುತ್ತಿವೆ ಎಂಬ ನಿಲುವು ಸಾರ್ವಜನಿಕವಾಗಿ ಒಪ್ಪಿತಗೊಳ್ಳುತ್ತ ಹೋಗುತ್ತದೆ.ಈ ಸಂಕಟವನ್ನು ಅರಿತೆ ಎಲ್ಲ ಧರ್ಮಗಳೂ ತಮ್ಮದೆಆದ ಒಂದು ಹಾವೇರಿ-ನ್ಯಾಯವನ್ನು ನಿರೂಪಿಸಲು ಪ್ರಯತ್ನಿಸಿವೆಯಾದರೂ
ಅವು ಎಷ್ಟು ಸಂಶಯಕ್ಕೆ ಎಡೆಮಾಡಿ ಕೊಡುತ್ತವೆ ಎಂದರೆ ಆಧುನಿಕ ಪ್ರಜ್ಞೆ ಅದನ್ನು ಒಪ್ಪುವದು ಬಹಳ ಕಷ್ಟ ವೆನಿಸುತ್ತದೆ.

Thursday, 24 November 2011

anudinaabhavaabdhiyalli....18

ತತ್ವಶಾಶ್ತ್ರದ ನೆಲೆಯಲ್ಲಿ ಕಾವ್ಯದ ಪ್ರಯೋಜನವು ಬಾಳಿಗೆ ಒದಗುವದೆಂದರೇನು?ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಹುಡುಕಿಕೊಳ್ಳದೆ ನಾವು ಕಾವ್ಯದ ತಾತ್ವಿಕ ಅಸ್ತಿತ್ವವನ್ನು ಪ್ರವೇಶಿಸುವಡೆ ಸಾಧ್ಯವಿಲ್ಲ.ಈ ಅರ್ಥದಲ್ಲಿ ಕಾವ್ಯ ಹಾಗು ತತ್ವಗಳ ಒಂದು
ಸಮಾನೋದ್ದೆಶಿತ ಕ್ರಿಯಾ ಸರಣಿಯನ್ನು ಮೊದಲು ಹುಡುಕಿಕೊಲ್ಲಲೆ ಬೇಕಾಗುತ್ತದೆ.
ಎಲ್ಲ ತತ್ವಜ್ಞಾನಗಲೂ ಮನುಷ್ಯನನ್ನು ಅವನ ದುಃಖದಿಂದ ಅವನನ್ನು ಮುಕ್ತಗೊಳಿಸಲು ಉದ್ಯುಕ್ತವಾಗಿವೆ ಎಂಬುದನ್ನು ನಮ್ಮ ಆರ್ಷೇಯ ಪಥ್ಯಗಳು ಮಮತ್ತೆ ಹೇಳುತ್ತವೆ.ಆದರೆ ಇಷ್ಟು ಅತ್ಯಂತ ಮೂಲಭೂತವಾದ ,ಎಲ್ಲ ಮನುಷ್ಯರ ನಿರಂತರ ಅವಶ್ಯಕತೆಯಾದ ,ಈ ಉದ್ದೇಶವನ್ನು ಇಡೇರಿಸುವ ಉದ್ದೇಶವನ್ನೇ ಹೊಂದಿದ ಅದರ ಕ್ರಿಯಾಭಿವ್ಯಕ್ತಿಯಲ್ಲಿ ಮಾತ್ರ ಪ್ರತಿ ಕ್ಷನವೂ ಅನಂತ ತೊದಕುಗಳಿಂದ ಕೂಡಿದೆ ಇದೇಕೆ ಹೀಗೆ?ಎಂಬ ಬಗೆಗೂ ಮನುಷ್ಯ ತುಂಬಾ ತಲೆ ಕೆಡಿಸಿಕೊಂಡಿದ್ದಾನೆ.ಇಷ್ಟೇ ಏಕೆ ಈ ಪ್ರಶ್ನೆಯ ತೊಡಕು ಕೂಡ ತತ್ವಜ್ಞಾನದ ಮೂಲಪ್ರಶ್ನೆಯಲ್ಲಿಯೆ ಕೂದಿಹೊಗಿದೆ.
ಬಹಶಃ ಆಚಾರ್ಯ ಮಧ್ವರೋಬ್ಬರೇ ಈ ಪ್ರಶ್ನೆಗೆ ಒಂದು ಗಟ್ಟಿ ಮುಟ್ಟಾದ ಉತ್ತರವನ್ನು ಕೊಡಲು ಯತ್ನಿಸಿದ್ದಾರೆ ಎನಿಸುತ್ತದೆ.ಅವರು
ಹೇಳುವಂತೆ ಎಲ್ಲ ಜೀವಗಳೂ ಮೂಲದಲ್ಲೇ ಭಿನ್ನವಾಗಿವೆ..ಅಂದರೆ ಒಂದೇ ಬಗೆಯ ದುಖನಿವಾರಣಾ ಮಾರ್ಗದಲ್ಲಿ ಇಬ್ಬರು ನಡೆಯುತ್ತಿದ್ದರೂ ಅವರ ಆ ಒಟ್ಟು ಸಾಧನೆಯ ಸ್ವರೂಪ,ಅನುಭವ,ಎಲ್ಲವೂ ಭಿನ್ನವಾಗಿರುತ್ತವೆ.ದ್ವೈತ ,ಅದ್ವೈತ,ಶೈವಾದ್ವೈತ,
ಏನೆ ಇರಲಿ ಯಾವ ಮಾರ್ಗದಲ್ಲಿ ನಾನು ನಡೆದರೂ ಅಲ್ಲಿನ ನನ್ನ ಅನುಭವ ಮತ್ತು ಸೋಲು ,ಗೆಳುವುಗೆಲಲ ನನ್ನವು
ಮಾತ್ರ.

Tuesday, 22 November 2011

anudinaabhavaabdhiyalli....17

ಇಂಥ ಸಂದರ್ಭದಲ್ಲಿ ಕವಿಯ ಒಳ ಸಂವೇದನೆಯೂ ಬಹಳಸಲ ತಪೋಭಂಗಿತವಾಗುವದು ಅನಿವಾರ್ಯ.ಆದರೆ ನಿಜವಾದ ಶಕ್ತ ಕವಿಯು ಕಾಲದ ಇಂಥ ಯಾವುದೇ ಪ್ರಲೋಭನೆಗಳನ್ನು ಮೀರಿ ನಿಂತೇ ನಿಲ್ಲುತ್ತಾನೆ.ಒಂದರ್ಥದಲ್ಲಿ ಈ ಬಗೆಯ ಸಂಕ್ರಮಣವನ್ನು ಅನುಭವಿಸಬೇಕಾಗುವ ಕವಿಯು ಹೆಚ್ಚು ಭಾಗ್ಯವನ್ತನೆಂದೆ ಎನ್ನಬೇಕು.ಏಕೆಂದರೆ ಬಾಳಿನ ಮೂಲಭೂತವಾದ ಸಂಕಟಗಳೊಂದಿಗೆ
ಅದರ ಅಭಿವ್ಯಕ್ತಿಯ ಮೂಲಭೂತ ಸಂಕಟಗಳೂ ಕೂಡಿದಾಗ ಆ ಕಾವ್ಯಕ್ಕೆ ಉಳಿದ ಕಾವ್ಯಗಳಿಗಿಲ್ಲದ ಒಂದು ವಿಶೇಷ ಕಳೆಯು ತಾನೇ ತಾನಾಗಿ ಬರುತ್ತದೆ.
ಆದರೆ ಬಾಳಿನ ಮೂಲಭೂತ ದುಖಗಳ ವಿಮೋಚನೆಗೆ ಕಾವ್ಯವು ಹೇಗೆ ಉಪಯುಕ್ತವಾಗುತ್ತದೆ?ಎಂಬ ಪ್ರಶ್ನೆಗೆ ನೇರವಾದ ಒಂದು ಸೂತ್ರರೂಪಿ ವ್ಯಾಖ್ಯಾನವು ಸಿಗುವದು ಬಹಳ ಕಷ್ಟವೆಂದೇ ಹೇಳಬೇಕು.ಆದರೂ ಒಂದು ಸ್ಥೂಲ ರೂಪದಲ್ಲಾದರೂ ಅದನ್ನು ಗುರುತಿಸಬಹುದಾದರೆ ಅದನ್ನು ಶಬದಾನುಭವ ಪ್ರಕ್ರಿಯೆ ಎಂದು ಗುರುತಿಸಬಹುದು.
ಈ ಶಬ್ದಾನುಭವದ ವಿವರವಾದ ಪರಿಶೀಲನೆಯು ಎರಡು ಮುಖ್ಯವಾದ ತತ್ವ ಶಾಖೆಗಳಲ್ಲಿ ತನ್ನ ಬೇರುಗಳನ್ನು ಚಾಚಿಕೊಂಡದ್ದು ನಮಗೆ ಸ್ಪಷ್ಟವಾಗಿ ಹೊಳೆಯುತ್ತದೆ.ಒಂದೆಂದರೆ ಅದು ತನ್ನ ಒಂದು ಬೇರನ್ನು ಭಾಶಾಶಾಷ್ಟ್ರದಲ್ಲೂ ಇನ್ನೊಂದನ್ನು ಧಾರ್ಮಿಕ ತತ್ವಜ್ನಾನದಲ್ಲೂ ಚಾಚಿಕೊಂಡಿರುತ್ತದೆ

Monday, 21 November 2011

anudinaabhavaabdhiyalli....16

ಆದರೆ ನಮಗೆ ಅದನ್ನು ಬಿಟ್ಟರೆ ಬೇರೆ ದಾರಿಯೂ ಇಲ್ಲ.ಹೀಗಾಗಿ ಒಂದು ಕವಿತೆ ಬಹುಜನ ಸಮಾಜದಲ್ಲಿ ಸಶಕ್ತವೆಂದು ಒಪ್ಪಿತವಾಗಿದ್ದರೂ ಆ ಕವಿತೆಯ ಶಕ್ತಿಯು ಪ್ರತಿಯೋಬ್ಬನಲ್ಲಿ ಅಂತರಾನುಭವಕ್ಕೆ ದಕ್ಕಿದ ರೀತಿ ಬೇರೆಯೇ ಆಗಿರುತ್ತದೆ
            ಈ ವಾಸ್ತವದ ಒಂದು ಪರಿಣಾಮವೆಂದರೆ ಹತ್ತು ಜನರು ಒಂದು ಕವಿತೆಯನ್ನು ಶ್ರೆಷ್ಟ್ಹವೆಂದ ತಕ್ಷನ ಒಂದು ಕವಿತೆ ಹತ್ತು
ಜನರನ್ನು ಏಕಕಾಲದಲ್ಲಿ ಯೆಕರಿತಿಯಲ್ಲಿ ಒಂದೇ ಬಗೆಯಲ್ಲಿ ಪ್ರಭಾವ ಬೀರಬಹುದೆಂಬ ಒಂದು ಆಕರ್ಷಕ ಆದರೆ ನಿಜವಲ್ಲದ ಒಂದು
ಸಿದ್ಧಾನ್ತವೆ ರೂಪುಗೊಳ್ಳುತ್ತದೆ.ದೇಶದ ಸ್ವಾತಂತ್ರ ಸಂಗ್ರಾಮ,ಯುದ್ಧ ಪ್ರಸಂಗಗಳಲ್ಲಿ ಹುಟ್ಟುವ ವಿರಾವೇಷದ ಪದ್ಯಗಳು ,ಯಾವುದೋ ಚಳುವಳಿಯ ನೆಪದಲ್ಲಿ ಮೂಡುವ ಸಮೂಹ ಗೀತೆಗಳು,ರಾಷ್ಟ್ರಗೀತೆ,ನಾದಗೀತೆಗಳಂಥ ಸಾಂಕೇತಿಕ ರಚನೆಗಳು ಈ ಬಗೆಯ ಕಾವ್ಯ ತಿಳುವಳಿಕೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಆಯಾ ಸಂದರ್ಭದಲ್ಲಿ ಬೆಳೆಸಿಬಿಡುತ್ತವೆ ಇದರ ಪರಿಣಾಮದ ಅತಿಯಾದ ಪ್ರಭಾವ ಸಾಮೂಹಿಕವಾಗಿ ಬೆಳೆದಾಗ ಕವಿತೆಯಲ್ಲಿ ''ಸಾಮಾಜಿಕತೆ''''ರಾಜಕೀಯ ಪ್ರಜ್ಞೆ''   ಪರಿಸರ ಪ್ರಜ್ಞೆ''''ಜಾಗತೀಕರಣದ ಚಿಂತನೆ''ಇವೇಲ್ಲವೂ ಇರಲೇಬೇಕೆಂಬ ಒಂದು ಅಸಜ ಒತ್ತಾಯವೂ ಕವಿಗಳ ಮೇಲೆ ಬಿಳತೊಡಗುತ್ತದೆ .
ಈ ಒತ್ತಡವನ್ನು ತಪ್ಪಿ ಕವಿಯೂ ಗಂಭೀರವಾಗಿ ಸ್ವಿಕರಿಸಿ ಬಿಟ್ಟರೆ ಆಗ ಎಲ್ಲ ಕವಿಗಳೂ ಕವಿತೆಯ ಒಂದು ''ನಮೂನೆ''ಯನ್ನು ತುಂಬಿಕೊಡುವ ಕರನಿಕರಾಗಿಬಿದುತ್ತಾರೆ .ಆಗ ಈ ಬಗೆಯ ಯೆಕತಾನತೆಯೂ ಬೇಸರ ಹುಟ್ಟಿಸಿ ಪ್ರತಿಯೊಬ್ಬ ಕವಿಯ ಸೋಪಜ್ನತೆಯನ್ನು ಹುಡುಕುತ್ತ ಹೋಗುವದು ವಿಮರ್ಶೆಯ ಚಟವಾಗಿಬಿಡುತ್ತದೆ ಇಲ್ಲವೇ ಹಟವಾಗಿಬಿದುತ್ತದೆ .ಇಂಥ ಸಂಕ್ರಮನಾವಸ್ಥೆಯ ಸಂದರ್ಭದಲ್ಲಿ ನಿಜವಾದ ಕಾವ್ಯಕರ್ಮದಲ್ಲಿ ತೊಡಗಿದ ಕವಿ ಒಂದಿಷ್ಟು ಅಜ್ನಾತವಾಸವನ್ನೂ
ಅನುಭವಿಸಬೇಕಾಗುವದು ಕಾಲಸಜವಾದ ಧರ್ಮವೇ ಆಗಿದೆ.