Thursday, 17 November 2011

anudinaabhavaabdhiyalli....12

ಕನ್ನಡದ ಕವಿಗಳು ಈ ದಾರಿಯಲ್ಲಿ ತಮ್ಮ ಬಹಳಷ್ಟು ಚಿಂತನೆಗಳನ್ನು ಗದ್ಯ ಬರಹದ ಮೂಲಕವೂ ಹಾಗು ಕಾವ್ಯದ ಮೂಲಕವೂ
ವ್ಯಕ್ತಪಡಿಸಿದ್ದಾರೆ.''ಉಡುಪೆನಾಸ್ಮಿಸಾಗರಂ ''ಎನ್ನುತ್ತಾನೆ ಕಾಳಿದಾಸ.''ಕಾಲೋಹ್ಯಯಂ ನಿರ್ವಧಿರ್ ವಿಪುಲಾಚ ಪ್ರಥ್ವಿ'' ಎನ್ನುತ್ತಾನೆ ಭವಭೂತಿ.''ಇಲ್ಲಿ ನೋಲ್ಪುದು ಪದುಮನಾಭನ ಮಹಿಮೆ ಮಾತ್ರವನು''ಎನ್ನುತ್ತಾನೆ ಕುಮಾರವ್ಯಾಸ.''ಹಲಗೆ ಬಳಪವ ಪಿದಿಯದೊಂದದಗ್ಗಲಿಕೆ''ಯೂ ಅವನಿಗಿದೆ.ಆತ ''ಪದವಿಟ್ಟು''ನಂತರ ''ಅಳುಪದವನಂತೆ.''ಇದು ಸಾಧ್ಯವೇ?ಸಾಧುವೆ?ಎಂದು ನಮಗೆ ಸಂಶಯವೂ ಬರಬಹುದು.ತನ್ನ ಕಾವ್ಯವನ್ನು ''ಅಬ್ಬಬ್ಬ ಎಂಚ ಪೋರ್ಲಾಂದೆಂದು ''ತುಳುವರು ಮೈಯುಬ್ಬಿ ಕೇಳಬೇಕೆಂದು ರತ್ನಾಕರವರ್ಣಿಯ ಆಶೆ.''ಬರಕೋ ಪದಾ ಬರಕೋ''ಎಂದು ಬಿನ್ನವಿಸುತ್ತಾನೆ ಶರೀಫಜ್ಜ.''ಹೇಳಿದರೆ ಹಾಳಾಗುವದು ಅನುಭವದ ಸವಿಯು/ಹೇಳದಿರೆ ತಾಳಲಾರ ಕವಿಯು''ಇದು ಕುವೆಂಪು ಅವರ ಸಂಕಟ.''ನಕ್ಷೆ ಹಿಡಿದು ತದಕಾಡಬೇಡ ನಕ್ಷತ್ರ ಮಾರ್ಗವನ್ನು/ತೊಂಡು ಮೆವಂಗೆ ದಾರಿ ಕೇಳದಿರು ಹತ್ತು ದುರ್ಗವನ್ನು''ಇದು ಬೇಂದ್ರೆಯವರ ಪ್ರೀತಿಯ ಆವ್ಹಾನ.ಅವರೇ ಹೇಳುವಂತೆ ಇ ಇಡೀ
ಕಾವ್ಯಲೋಕವೇ ಒಂದು ದೊಡ್ಡ ಕಾಡು.ಇಲ್ಲಿ ''ನೂರು ಮರ ,ನೂರು ಸ್ವರ/ಒಂದೊಂದು ಅತಿ ಮಧುರ''.ಇದು ಅದರ ಎಲ್ಲ ಕಾಲದ
ಪ್ರಕ್ರತಿ ಸಹಜ ವ್ಯಾಪಾರವೇ ಆಗಿದೆ.ಕವಿಯ ವೈಯಕ್ತಿಕ ಬಾಳಿನ ಬಗೆಗೆ ಎಲ್ಲರಿಗೂ ಆಸಕ್ತಿ ಇರಲಾರದು .ಅದಕ್ಕೆಂದೇ ಆತ ತನ್ನ ''ಪಾಡು''ಏನೆ ಇದ್ದರೂ ಅದರ ''ಹಾಡು''ಗಳನ್ನಷ್ಟೇ ಜಗತ್ತಿನ ರಸಿಕರಿಗೆ ಕೊಡಬೇಕು.''ನೂರಾರು ಭಾವದ ಬಾವಿ,ಎತ್ತಿಕೋ ನಿನಗೆ
ಬೇಕಾದಷ್ಟು ಸಿಹಿನಿರ/ಪಾತ್ರೆಯಾಕಾರಗಳ ಗೊಡವೆ ಏತಕೆ ನಿನಗೆ ಆಗಬೇಕಾದದ್ದು ದಾಹ ಪರಿಹಾರ''ಇದು ಕಾವ್ಯ
ಜಗತ್ತಿನ ಸಂಕ್ರಮನಾವಶ್ತೆಯಲ್ಲಿ ಕವಿ ಜಿ ಎಸ ಶಿವರುದ್ರಪ್ಪನವರು ಕೊಡುವ ಪರಿಹಾರ.

No comments:

Post a Comment