ಒಂದು ಮಾತಂತೂ ಸತ್ಯ.ಜೀವನದಲ್ಲಿ ಅನುಭವದ ಅರ್ಥದ ಶೋಧನೆ ಹಾಗು ಶೋಧಿತವಾದ ಅನುಭವದ ಅರ್ಥಕ್ಕೆ ತಕ್ಕ ಭಾಷೆಯ ಶೋಧನೆ ಎರಡರಲ್ಲೂ ಮನುಷ್ಯನನ್ನು ಆಳವಾಗಿ ತೊಡಗಿಸಿಕೊಳ್ಳುವದು ಅನುಭವದ ಅರ್ಥದ ಶೋಧನೆಯೇ ಆಗಿದೆ.ಏಕೆಂದರೆ ಅದರ ಹಿಂದೆ ಒದಗಿದ ದುಃಖದಿಂದ ಪಾರಾಗುವ ಒಂದು ದೊಡ್ಡ ಪ್ರಲೋಭನೆಯೂ ಇರುತ್ತದೆ.ಇಷ್ಟಕ್ಕೂ ಸಾಮಾನ್ಯವಾಗಿ ನಮಗೆಲ್ಲ ಭಾಷೆ ಬೇಕಾಗುವದೆ ಭಾವದ ಒತ್ತಡದಿಂದ ಹೊರಬರಲು ಮಾತ್ರ.ಈ ಒತ್ತಡದಲ್ಲಿ ನಾವು ಈ ಉದ್ದೇಶಕ್ಕಾಗಿಯೂ ಭಾಷೆಯನ್ನು ಬಳುಸುತ್ತೆವೆಯಾದರೂ ಅಲ್ಲಿ ನಮ್ಮ ಲಕ್ಷವೆಲ್ಲ ಭಾವದ ಬಿಡುಗಡೆಯ ಕಡೆಗೆ ಇರುತ್ತದೆಯೇ ವಿನಃ ಅದಕ್ಕಾಗಿ ನಾನು ಬಳಸುತ್ತಿರುವ ಭಾಷೆ ಅದಕ್ಕೆ ಸೂಕ್ತವಾಗಿದೆಯೆ ಎಂಬ ಬಗೆಗೆ ನಮ್ಮ ಗಮನ ಅಷ್ಟಾಗಿ ಇರುವದೆಇಲ್ಲ.
ಆದರೆ ಎಲ್ಲ ಕಾಲದಲ್ಲೂ ಕೆಲವು ವಿಚಿತ್ರ ತರಹದ ಜನರು ಇರುತ್ತಾರೆ.ಇವರಿಗೆ ನಮ್ಮೆಲ್ಲರಂತೆಯೇ ಅನುಭವದಿಂದ ಬಿಡುಗಡೆ ಯಂತೂ ಬೇಕೇ ಬೇಕು.ಆದರೆ ಇವರು ಅದಕ್ಕಾಗಿ ಬಳಸುವ ಭಾಷೆಯ ಬಗೆಗೆ ವಿಶೇಷ ಕಾಲಜಿಉಲ್ಲವರಾಗಿರುತ್ತಾರೆ.ಇ ಕಾಳಜಿಯು ಅವರಿಗೆ ಏಕೆ ಹುಟ್ಟುತ್ತದೆ ಎಂಬ ಜಿಜ್ಞಾಸೆಯೂ ಸಾಕಷ್ಟು ನಡೆದಿದೆ.ಆ ಚರ್ಚೆಗಳನ್ನೆಲ್ಲ ನೋಡಿದರೆ ಒಂದೇ ಒಂದು ಉತ್ತರ ಮತ್ತೆ ಮತ್ತೆ ಅಲ್ಲಿ ದೊರೆತಂತೆಕಾನುತ್ತದೆ ಅದೆಂದರೆ ಅವರಿಗಿರುವ ಭಾಷೆಯ ಮದದ ವ್ಯಸನವೆಂದೆ ನಾವು ಹೇಳಬೇಕಾಗುತ್ತದೆ.
ಹಾಗಾದರೆ ಈ ವ್ಯಸನವಾದರೂ ಎಲ್ಲರಿಗೂ ಏಕಿಲ್ಲ ಎಂಬ ಪ್ರಶ್ನೆಗೆ ಸರ್ವರಿಗೂ ಸಮಾಧಾನಕರವಾದ ಉತ್ತರ ನಮಗೆ ಇಂದಿಗೂ ಸಿಕ್ಕಿಲ್ಲ.ಆದರೆ ಆ ಬಗೆಗೆ ಒಂದು ಊಹೆಯನ್ನು ಹೀಗೆ ಮಾಡಬಹುದೇನೋ.
ಮನುಷ್ಯನ ಜೀವನದಲ್ಲಿ ಹಲವು ಸಲ ಕೆಲವು ವಿಚಿತ್ರ ಪ್ರಸಂಗಗಳು ಬರುತ್ತವೆ.ಆಗ ಅವನಿಗೆ ಏನನ್ನೂ ಬಹಳ ಆಳವಾಗಿ
ಹೇಳಬೇಕೆನಿಸುತ್ತದೆ ಇಲ್ಲವೇ ತನಗೆ ತಾನೇ ಏನೂ ಹೆಲಿಕೊಲ್ಲಬೇಕೆನಿಸುತ್ತದೆ.ಆಗ ಅವನಿಗೆ ಭ್ಹಾಷೆಯ ಅವಶ್ಯಕತೆ
ನಮಗೆಲ್ಲರಿಗೂ ಇದ್ದಂತೆಯೇ ಇರುತ್ತದೆ.ಆದರೆ ನಾವು ನಮಗೆ ದಕ್ಕಿದಸ್ಟು ಭಾಷೆಯ ಆಧಾರದ ಮೇಲೆಯೇ ಎಲ್ಲ
ಅವಶ್ಯಕತೆಗಳನ್ನೂ ಪೂರೈಸಿಕೊಂಡು ಬಿಟ್ಟಿರುತ್ತೇವೆ.ನಮ್ಮ ಭಾಷೆ ನಮ್ಮ ನಿಜವಾದ ಅಗತ್ಯವನ್ನು ಭಾಷೆಯ
ನೆಲೆಯಲ್ಲಿಯಾದರೂ ಸರಿಯಾಗಿ ನಾವು ನಿರ್ವಹಿಸಿದೆವೆಯೇ ಎಂಬ ಬಗೆಗೆ ನಮ್ಮ ಕಾಳಜಿ ಇರುವದೆ ಇಲ್ಲ.
ಉದಾಹರಣೆಗೆ ಒಬ್ಬ ಹುಡುಗ ಒಂದು ಹುಡುಗೆಯನ್ನು ಪ್ರೀತಿಸಿ ಅವಳ ಜೊತೆಗೆ ಅವನ ಮದುವೆಯೂ
ನಿಶ್ಚಯವಾಗಿದೆಯೆಂದು ತಿಳಿದುಕೊಳ್ಳೋಣ.ಇನ್ನು ಮದುವೆಯಾಗಿಲ್ಲ.ಆದರೆ ಆಗಲಿದೆ.ಅವರಿಬ್ಬರೂ ತಮ್ಮ ತಮ್ಮ
ಆಳವಾದ ಭಾವನೆಗಳನ್ನು ಹಂಚಿಕೊಳ್ಳಲು ಬಯಸಿದ್ದಾರೆ.ಈಗ ಅವರಿಗೆ ಒಂದು ಭಾಷೆ ಬೇಕು.ಎಂಥಹ ಸಾಮಾನ್ಯನಿಗೂ
ಈಗ ಒಂದು ಭಾಷೆ ಬೇಕು.ಆ ಭಾಷೆ ಅವರ ಒಳ ಮನಸ್ಸುಗಳ ಭಾವದ ತಕ್ಕ ಸಂವ್ಹಹನವನ್ನು ನಿರ್ವಹಿಸಬೇಕು
ಹಾಗಾದರೆ ಈಗ ಅವರು ಅಂಥ ಭಾಷೆಯನ್ನು ಎಲ್ಲಿಂದ ,ಹೇಗೆ ,ಪಡೆಯುತ್ತಾರೆ ಎಂಬುದು ಎಲ್ಲ ಬಗೆಯ ಕಾವ್ಯ -ಭಾಷೆಯ
ಮೂಲಭೂತವಾದ ಚಿಂತನ ಕೇಂದ್ರವಾಗಿದೆ.ಸಾಮಾನ್ಯವಾಗಿ ಇಂಥ ಪ್ರಸಂಗಗಳಲ್ಲಿ ಎಲ್ಲರೂ ಒಂದು ಬಗೆಯ
ಪಾರಂಪರಿಕ ,ರೂಧವಾದ ,ಭಾಷೆಯನ್ನು ಬಳಸುತ್ತಾರೆ.ನಾನು ನ್ಯಾಯಾಲಯದಲ್ಲಿ ಕೆಲಸಮಾಡುವಾಗ ಅನೇಕ
ಪ್ರೇಮ-ಪತ್ರಗಳನ್ನು ನೋಡಿದೆ.ಬಹಳ ವಿಚಿತ್ರವೆನಿಸುತ್ತಿತ್ತು.ಆ ಮನುಷ್ಯ ಹಳ್ಳಿಯ ಅನಕ್ಸರಸ್ಥ ಕುಟುಂಬದಿಂದ
ಬಂದವ ಆದರೆ ಅವನಿಗೆ ತನ್ನ ಪ್ರಿಯಕರಳನ್ನು ''ಚಂದ್ರಮುಖಿ'',''ಹೇ ನನ್ನ ಗುಲಾಬಿಯ ಹೂವೆ ''ಎಂದು ವರ್ಣಿಸಲು
ಹೇಗೆ ಸಾಧ್ಯವಾಇತು ಎಂಬುದು ನನ್ನನ್ನು ತುಂಬಾ ಕಾಡಿತು.ನಾನು ಒಮ್ಮೆ ಆ ವ್ಯಕ್ತಿಯನ್ನು ಈ ಬಗೆಗೆ ಕೇಳಿದೆ ಕೂಡಾ.
ಆದರೆ ಆತ ''ಅದೇನ ಬಿಡ್ರಿ ,ಎಲ್ಲಾರಿಗೂ ಗೊತ್ತ ಇದ್ದ ಇರತೈತಿ ''ಎಂದ.ಅಂದರೆ ಕಾವ್ಯಭಾಷೆಯ ಬಳಕೆ
ಎನ್ನುವದು ಕೇವಲ ಕವಿಗಳ ಸೋತ್ತೆನಲ್ಲ.ಅದನ್ನು ಎಲ್ಲರೂ ಅವಶ್ಯಕತೆ ಇದ್ದಾಗ ಲಭ್ಯವಿದ್ದಷ್ಟು ತಮ್ಮ
ಸಂಪನ್ಮೂಲವನ್ನು ಬಳಸಿ ಉಪಯೋಗಿಸಿಕೊಳ್ಳುತ್ತಲೇ ಇರುತ್ತಾರೆ ಯೆನ್ದನ್ತಾಇತು ಹಾಗಾದರೆ ಕವಿಯು
ಬಳಸುವ ಕಾವ್ಯಭಾಷೆಯ ವಿಶೇಷತೆ ಏನು ಎನ್ನುವದನ್ನು ನಾವಿಗನೋಡಬಹುದು.