Friday, 18 November 2011

anudinaabhavaabdhiyalli....13

ನಮ್ಮ ಜಾನಪದ ಕವಿಗಳು ಕೂಡ ತಮ್ಮ ಈ ಬಗೆಯ ಅನುಭವಗಳನ್ನು ತುಂಬಾ ಸುಂದರವಾಗಿ ಹೇಳಿಕೊಂಡಿದ್ದಾರೆ.''ಆದಾವು ನಮ
ಜ್ವಾಳ ,ಉಳದಾವು ನಮ ಹಾಡ '' ಎನ್ನುತ್ತಾಳೆ ನಮ್ಮ ಹಳ್ಳಿಯ ಗರತಿ.ಅದು ನಿಜವೇ.ಬದುಕು ಮುಗಿಯುತ್ತದೆಯೇ ವಿನಃ ಬರಹವು
ಮುಗಿಯುವದಿಲ್ಲ.ನಿತ್ಯ ಬದುಕಿನ ಸುಖ-ದುಖಗಳು,ಜಂಜಾಟಗಳು,ಸರಸ-ವಿರಸಗಳು,ಇವುಗಳನ್ನೆಲ್ಲ ಎಷ್ಟು ಕವಿತೆಗಳ ಮಾಪುಗಳ ಮೂಲಕ ಅಳೆದು ಮುಗಿಸುವದು ಸಾಧ್ಯ?ಆದರೆ ಜಾನಪದ ಕವಿಗೆ ಇರುವ ಒಂದು ಅನುಕೂಲವೆಂದರೆ ಆತನ ಕಾವ್ಯ-ಪ್ರಜ್ಞೆ ಒಂದು ಪ್ರತ್ಯೇಕವಾದ ಅಸ್ತಿತ್ವವಾಗಿ ಅವನಲ್ಲಿ ಬೇರು ಬಿಟ್ಟಿರುವದಿಲ್ಲ.ಇದರಿಂದಾಗಿ ಅವನ ಕವಿತೆ ಅವನ ಬದುಕಿನ ಪ್ರಾಕ್ರತಿಕ ಚಟುವಟಿಕೆಗಳ ಒಂದು ಭಾಗವಾಗಿಯೇ ಕೆಲಸ ಮಾಡುತ್ತದೆ.ಹೀಗಾಗಿ ನಮ್ಮ ಜಾನಪದ ಕವಿತೆಗೆ ನಿಸರ್ಗ ಸಹಜವಾದ ಚೆಲುವು
ಅತ್ಯಂತ ಸಹಜ ಗತಿಯಲ್ಲಿ ಅರಳಿ ನಿಲ್ಲುತ್ತದೆ.ಅದರ ಇನ್ನೊಂದು ಮುಖ್ಯ ಲಕ್ಸನವೆಂದರೆ ಅದು ಇರುವದೆ ಹಾಡಿಕೊಳ್ಳಲು.ಅರ್ಥದ ಪದರುಗಳು ಲಯದ ತಾನಗಳಲ್ಲಿ ಅರಗಿ ಹೋಗುವ -ಪವಾದಸದ್ರಷವಾದ   ಕ್ರಿಯೆ -ಇಲ್ಲಿ ಯಾರಿಗೂ ಗೊತ್ತಾಗದಂತೆ ನಡೆದು ಹೋಗುತ್ತದೆ ಲೋಕಜೀವನದ  ಪ್ರತಿಯೊಂದು ಭಾವ-ಬಿನ್ದುಗಳೂ ಈ ಕಾವ್ಯದಲ್ಲಿ ಅನಂತ ರಸಲೋಕಗಳನ್ನು ನಿರ್ಮಿಸುತ್ತಲೇ ಇರುತ್ತವೆ.
 .

No comments:

Post a Comment