Thursday, 3 November 2011

ಅನುದಿನ ಭವಾಬ್ಧಿಯಲ್ಲಿ ....೧


ಇಂದಿನಿಂದ ಒಳಗೆ ದುಮಡಿಹಾಕುವ ವಿಚಾರಗಳನ್ನು ಹೊರಗೆ ಆಟಕ್ಕೆ ಕಳಿಸುವ ಕೆಲಸ ಶುರುಮಾಡಿದ್ದೇನೆ.
ಮನುಷ್ಯನೊಬ್ಬನನ್ನು ಬಿಟ್ಟರೆ ಈ ಜಗತ್ತಿನಲ್ಲಿ ಕವಿತೆಗಳನ್ನು ಬರೆಯುವ ಇನ್ನೊಂದು ಪ್ರಾಣಿ ಇದ್ದಂತಿಲ್ಲ.ಮನುಷ್ಯನಿಗೆ ಕವಿತೆ ಬರೆಯಬೇಕೆಂದು ಅನ್ನಿಸುವದಾದರೂ ಯಾಕೆ ಎಂಬ ಪ್ರಶ್ನೆಯನ್ನೂ ನಮ್ಮ ತತ್ವಜ್ಞಾನಿಗಳು ಕಾವ್ಯ-ಮಿಮಾಂಸಕರು ಅನೇಕ ಬಗೆಯಲ್ಲಿ ಕೇಳಿಕೊಂಡಿದ್ದಾರೆ.ತಮ್ಮದೇ ಆದ ಉತ್ತರವನ್ನೂ ಕಂಡುಕೊಂಡಿದ್ದಾರೆ.ಈ ಪ್ರಶ್ನೆಗಳು ಹಾಗು ಉತ್ತರಗಳು ಕಾಲಕಾಲಕ್ಕೆ ಮತ್ತೆ ಮತ್ತೆ ಹೊಸದಾಗಿ ರುಪುಗೊಳುತ್ತವೆನ್ದುಕಾನುತ್ತದೆ.
ಈ ಅರ್ಥದಲ್ಲಿ ಇಂದಿನ ನಮ್ಮ ಕಾಲದ ಈ ಬಗೆಯ ಪ್ರಶ್ನೆಗಳನ್ನು ನಾವೀಗ ಕೇಳಿಕೊಳ್ಳಬೇಕಾಗಿದೆ.ಕವಿತೆ ಇಂದು ಯಾರಿಗೂ ಬೇಕಾಗಿಲ್ಲ ಎನ್ನುವದಕ್ಕಿಂತ ಕವಿತೆ ಪರಂಪರಾಗತವಾಗಿ ಮಾಡುತ್ತಿದ್ದ ,ಕೊಡುತ್ತಿದ್ದ ಫಲಗಳನ್ನು ಇಂದು ಕೊಡುತ್ತಿಲ್ಲ.ಇದು ಯಾರ ತಪ್ಪು ಎಂದು ಹುಡುಕುತ್ತ ಹೋಗಿ ನಮ್ಮ-ನಮ್ಮೊಳಗೇ ಕೆಸರಾಟ ಆಡುವದಕ್ಕಿಂತ ಪ್ರತಿಯೊಬ್ಬ ಕವಿಯೂ ತನ್ನೊಳಗೆ ತಾನೇ ಈ ಬಗೆಯ ಒಂದು ಒಳ-ಹುಡುಕಾಟವನ್ನು ಮಾಡಿಕೊಳ್ಳುವದು ಇಂದಿನ ಕಾವ್ಯ-ಸಂಸ್ಕ್ರತಿಯ ತುರ್ತಿನ ಕಾರ್ಯಾಚಾರನೆಯಾಗಬೇಕಿದೆ  ಹಾಗಾದರೆ ಆ ಚಿಂತನ ಕಾರ್ಯದ ನನ್ನ ವೈಯಕ್ತಿಕ ನೆಲೆಯ ಸ್ವರೂಪವೇನು ಎನ್ನುವದನ್ನು ನಾನೇ ಗುರುತಿಸಿಕೊಳ್ಳಬೇಕು ಹಾಗು ಅದು ನನ್ನ ಕಾವ್ಯದ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ನಾನು ನೋಡಿಕೊಳ್ಳಬೇಕು.
ಈ ಆಲೋಚನೆಯನ್ನು ಮತ್ತೆ ಮುಂದುವರೆಸುವ ಆಶೆ ಒಳಗೆ ತೀವ್ರವಾಗಿ ಕಾಡುತ್ತಿದೆ.

No comments:

Post a Comment