Monday, 7 November 2011

ಅನುದಿನ ಭವಾಬ್ಧಿಯಲ್ಲಿ ...೫

ಮನುಷ್ಯನು ತನ್ನನ್ನು ತಾನು ಸ್ವತಂತ್ರನೆಂದೆ ತಿಳಿಯಲಿ ಅಸ್ವತಂತ್ರನೆಂದೆ ತಿಳಿಯಲಿ,ಅವು ಅವನ ಪರಿಪೂರ್ಣ ತಿಳಿವುಗಲಾಗಳಾರವು ಏಕೆಂದರೆ ಬದುಕಿನಲ್ಲಿ ನಾವು ಅಸ್ವತಂತ್ರರೆಂದು ನಾವು ಭಾವಿಸಿದರೂ ಅನುದಿನದ ಕರ್ಮಗಳಲ್ಲಿ ಅನೇಕ ನಿರ್ಣಯಗಳನ್ನು ನಮ್ಮ ಪ್ರಜ್ಞೆ ತನ್ನ ದತ್ತವಾದ ಸ್ವಾತಂತ್ರವನ್ನು ಬಳಸಿಕೊಂಡು ತೆಗೆದುಕೊಲ್ಲಳೆಬೇಕಾಗುತ್ತದೆ ಹೀಗಾಗಿ ತಾನು ಅಸ್ವ್ತಂತ್ರನೆಂದು ನಂಬಿದವನೂ ಒಂದು ಸ್ವಾಯತ್ತ ನಿರ್ಣಯವನ್ನು ತೆಗೆದುಕೊಂಡೆ ಇರುತ್ತಾನೆ.ಬಹಳಾದರೆ ಆ ತುರ್ತು ಮುಗಿದಮೇಲೆ ಅದರ ಫಲಗಳ ಅನುಭವದ ಸಂದರ್ಭದಲ್ಲಿ ಆತ ತಾನು ಅಸ್ವತಂತ್ರನೆಮ್ಬುದನ್ನು ತನ್ನ ಈಡಿ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳಬಹುದು.ಇನ್ನು ತನ್ನ ಪ್ರಜ್ಞೆಯು ಸ್ವತಂತ್ರವಾದುದೆಂದು ಹೊರಡುವ ಪ್ರಜ್ಞೆಗೆ ತನ್ನ ಕರ್ಮಗಳ ಕಾರ್ಯಾಚರೆಣೆಗೆ ಯಾವುದೇ ಮೂಲಭೂತವಾದ ತತ್ವವೇ ಇಲ್ಲದಿರುವದರಿಂದ ಅಲ್ಲಿ ಸುಖ-ದುಖಗಳ ಬಗೆಗಿನ ಜಿಜ್ಞಾಸೆಗೆ ಯಾವುದೇ ಗಟ್ಟಿಯಾದ ನೆಲೆಯೇ ಇರುವದಿಲ್ಲ.ಹೀಗಾಗಿ ದುಖವೆಂಬ ಅನುಭವದ ಅಸ್ತಿತ್ವವನ್ನೇ ನಿರಾಕರಿಸುವದು,ದುಖವಾದಾಗಲೂ ಆಗಿಯೇಇಲ್ಲ ಎಂಬಂತೆ ನಟಿಸುವದು ,ಅಥವಾ ಆ ದುಃಖಕ್ಕೆ ಯಾವುದೂ ಹೊರ ಕಾರಣಗಳನ್ನು ಹುಡುಕುತ್ತ ಹೋಗುವದು ಮತ್ತು ಆ ಕಾರಣಗಳನ್ನು ತಿದ್ದುತ್ತ ಕುಡುವದು ಇವು ಈ ಬಗೆಯ ಮನಸ್ಸಿನ ಚಟುವಟಿಕೆಗಲಾಗಿಬಿದುತ್ತವೆ ಹೀಗೆ ಈ ಬಗೆಯಲ್ಲಿ ನಡೆಯುವ ಎರಡೂ ಬಗೆಯ ಚಿಂತನೆಗಳೂ ಭಾಷೆಯ ಬಗೆಗೆ ರೂಪಿಸಿಕೊಳ್ಳುವ ಆಲೋಚನೆಗಳೂ ಕೂಡ ಭಿನ್ನವಾಗಿರುತ್ತವೆ.

No comments:

Post a Comment