ಆದರೆ ನಿಜವಾದ ಸಮಸ್ಯೆ ಇರುವದು ಯಾವ ಕಲೆಯ ದಾರಿಯು ಯಾವ ಧರ್ಮಪಥಕ್ಕೆ ನಮ್ಮನ್ನು ತಲುಪಿಸುತ್ತದೆ ಎಂಬ ಬಗೆಗೆ ಯಾವುದೇ ಸುತ್ರರೂಪಿ ನಿಯಮಗಳಿಲ್ಲವೆನ್ನುವ ಅದರ ಸ್ವರೂಪದಲ್ಲಿ ಇದೆ.ಈ ಪಥ ಮತ್ತು ಗಂತವ್ಯಗಳ ಬಗೆಗೆ ಇರುವ ಒಂದು
ಮೂಲಭೂತವಾದ ವಾದವು ಈ ಪ್ರಶ್ನೆಯನ್ನು ಮನುಷ್ಯನ ಸಮಗ್ರ ವ್ಯಕ್ತಿತ್ವವನ್ನೇ ಸಂಪೂರ್ಣವಾಗಿ ''ಬಿಡಿ''ಎಂದು ಗಮನಿಸುಮೂಲಕ ಉತ್ತರಿಸಲು ಪ್ರಯತ್ನಿಸುತ್ತದೆ.ಅದರ ಪ್ರಕಾರ ಪ್ರತಿಯೊಬ್ಬನ ದಾರಿ ಮತ್ತು ಗಂತವ್ಯಗಳು ಎಷ್ಟು ಬಿಡಿಬಿಡಿಯಾಗಿಯೂ ಭಿನ್ನವಾಗಿಯೂ ಇವೆಯೆಂದರೆ ಬಾಹ್ಯದಲ್ಲಿ ಒಂದೇ ದಾರಿಯಲ್ಲಿ ಹೊರಟವರಂತೆ ಕಾಣುವವರೂ ಹಾಗೆ ಚಲಿಸುತ್ತಿರುವದಿಲ್ಲ.ಇದರ ಒಟ್ಟೂ ಆಶಯವನ್ನು ನಾವು ಇದೆ ದಿಕ್ಕಿನಲ್ಲಿ ಬೆಳೆಸಿದರೆ ಆಗ ನಾವು ಕಲೆಯ ಜಗತ್ತಿಗೆ ಸಂಬಂಧಿಸಿದ
ಇನ್ನೊಂದು ತತ್ವದತ್ತ ನಡೆಯಬೇಕಾಗುತ್ತದೆ.ಅದರಂತೆ ಕಾವ್ಯಸ್ರಷ್ಟಿ ಹಾಗು ಕಾವ್ಯದ ರಸಗ್ರಹಣ ಇವೂ ಕೂಡ ತೀರ ವೈಯಕ್ತಿಕ ಪರಿಣಾಮಗಳು.ಒಂದು ದೊಡ್ಡ ಸಮೂಹವೆ ಒಂದು ಕ್ರತಿಯ ಬಗೆಗೆ ಒಂದೇ ಬಗೆಯ ಅನುಭವವನ್ನು ಪಡೆದಂತೆ ಕಾಣಿಸಿದರೂ ಅಲ್ಲಿ
ಅದು ಹಾಗೆ ಆಗಿರುವದಿಲ್ಲ.ನಮಗೆ ನಮ್ಮ ತೀರ ವಿಶೇಷವಾದ ಅನುಭವವನ್ನು ಹೇಳಿಕೊಳ್ಳಲು ತೀರ ವಿಶೇಷವಾದ ಭಾಷೆ ಇಲ್ಲವಾದ್ದರಿಂದ ನಾವೆಲ್ಲರೂ ಮತ್ತೆ ಮತ್ತೆ ಅದೇ ಶಬ್ದಗಳನ್ನು ಬಳಸಬೇಕಾಗುತ್ತದೆ.''ಅದ್ಭುತ'''ಸುಂದರ''''ಸಶಕ್ತ''ಅರ್ಥಪೂರ್ಣ''
ಇಂತಹ ಎಷ್ಟು ಶಬ್ದಗಳನ್ನು ನಾವು ಬಳಸಿದರೂ ಅವು ನಮ್ಮ ಅಸಲಿ ಅನುಭವದ ಸ್ವರೂಪಗಳನ್ನು ನಿರ್ವಚಿಸಲಾರವು.
ಮೂಲಭೂತವಾದ ವಾದವು ಈ ಪ್ರಶ್ನೆಯನ್ನು ಮನುಷ್ಯನ ಸಮಗ್ರ ವ್ಯಕ್ತಿತ್ವವನ್ನೇ ಸಂಪೂರ್ಣವಾಗಿ ''ಬಿಡಿ''ಎಂದು ಗಮನಿಸುಮೂಲಕ ಉತ್ತರಿಸಲು ಪ್ರಯತ್ನಿಸುತ್ತದೆ.ಅದರ ಪ್ರಕಾರ ಪ್ರತಿಯೊಬ್ಬನ ದಾರಿ ಮತ್ತು ಗಂತವ್ಯಗಳು ಎಷ್ಟು ಬಿಡಿಬಿಡಿಯಾಗಿಯೂ ಭಿನ್ನವಾಗಿಯೂ ಇವೆಯೆಂದರೆ ಬಾಹ್ಯದಲ್ಲಿ ಒಂದೇ ದಾರಿಯಲ್ಲಿ ಹೊರಟವರಂತೆ ಕಾಣುವವರೂ ಹಾಗೆ ಚಲಿಸುತ್ತಿರುವದಿಲ್ಲ.ಇದರ ಒಟ್ಟೂ ಆಶಯವನ್ನು ನಾವು ಇದೆ ದಿಕ್ಕಿನಲ್ಲಿ ಬೆಳೆಸಿದರೆ ಆಗ ನಾವು ಕಲೆಯ ಜಗತ್ತಿಗೆ ಸಂಬಂಧಿಸಿದ
ಇನ್ನೊಂದು ತತ್ವದತ್ತ ನಡೆಯಬೇಕಾಗುತ್ತದೆ.ಅದರಂತೆ ಕಾವ್ಯಸ್ರಷ್ಟಿ ಹಾಗು ಕಾವ್ಯದ ರಸಗ್ರಹಣ ಇವೂ ಕೂಡ ತೀರ ವೈಯಕ್ತಿಕ ಪರಿಣಾಮಗಳು.ಒಂದು ದೊಡ್ಡ ಸಮೂಹವೆ ಒಂದು ಕ್ರತಿಯ ಬಗೆಗೆ ಒಂದೇ ಬಗೆಯ ಅನುಭವವನ್ನು ಪಡೆದಂತೆ ಕಾಣಿಸಿದರೂ ಅಲ್ಲಿ
ಅದು ಹಾಗೆ ಆಗಿರುವದಿಲ್ಲ.ನಮಗೆ ನಮ್ಮ ತೀರ ವಿಶೇಷವಾದ ಅನುಭವವನ್ನು ಹೇಳಿಕೊಳ್ಳಲು ತೀರ ವಿಶೇಷವಾದ ಭಾಷೆ ಇಲ್ಲವಾದ್ದರಿಂದ ನಾವೆಲ್ಲರೂ ಮತ್ತೆ ಮತ್ತೆ ಅದೇ ಶಬ್ದಗಳನ್ನು ಬಳಸಬೇಕಾಗುತ್ತದೆ.''ಅದ್ಭುತ'''ಸುಂದರ''''ಸಶಕ್ತ''ಅರ್ಥಪೂರ್ಣ''
ಇಂತಹ ಎಷ್ಟು ಶಬ್ದಗಳನ್ನು ನಾವು ಬಳಸಿದರೂ ಅವು ನಮ್ಮ ಅಸಲಿ ಅನುಭವದ ಸ್ವರೂಪಗಳನ್ನು ನಿರ್ವಚಿಸಲಾರವು.
No comments:
Post a Comment