Saturday, 26 November 2011

anudinaabhavaabdhiyalli....20

ಈ ಸಂದರ್ಭದ ಒಟ್ಟು ಮುಖ್ಯ ಬಿಂದು ಇರುವದು ನಮ್ಮ ಹೊರ-ಒಳಗಿನ ಅಸ್ತಿತ್ವಗಳ ಅವಶ್ಯಕತೆಗಳನ್ನು ಪುರೈಸಿಕೊಳ್ಳುವಲ್ಲಿ ನಾವು
ತೆಗೆದುಕೊಳ್ಳುವ ತಿರ್ಮಾನಗಳಲ್ಲಿ ಇದೆ.ಅಂದರೆ ಬರಿ ಹೊರಗನ್ನು ಲಕ್ಷಿಸುವದು ಅಥವಾ ಬರಿ ಒಳಗನ್ನು ಲಕ್ಷಿಸುವದು ಈ ಎರಡು ಅಪಾಯಗಳಿಂದ ನಾವು ಪಾರಾದಾಗಲೇ ಈ ಬಗೆಗೆ ನಾವು ಒಂದು ಸಾವಧಾನಿಕ ನಿಲುವನ್ನು ತೆಗೆದುಕೊಳ್ಳುವದು ಸಾಧ್ಯವಿದೆ.
ಆದರೆ ತತ್ವಜ್ಞಾನದ ಚರಿತ್ರೆ ಈ ಬಗೆಯ ಸಮಚಿತ್ತದ ಆವಿಷ್ಕಾರವು ಎಷ್ಟು ಕಷ್ಟ ಎಂಬುದನ್ನೇ ಮತ್ತೆ ಮತ್ತೆ ಒತ್ತಿ ಹೇಳುವಂತಿದೆ.ಇಷ್ಟೇ ಏಕೆ ಇಂತಹ ಆರೋಗ್ಯಪೂರ್ಣ ಚಿಂತನೆಯ ಅಲಭ್ಯತಇನ್ದಾಗಿಯೇ ಜಗತ್ತಿನಲ್ಲಿ ನಡೆದ ಹಿಂಸಾತ್ಮಕ ಸಂಘರ್ಷಗಳ ಒಂದು ದೊಡ್ಡ
ಚಿತ್ರಪ್ರದರ್ಷನವನ್ನೇ ನಾವು ಯಾವುದೇ ದೇಶದ ಚರಿತ್ರೆಯಲ್ಲೂ ಧ್ಹಾಲವಾಗಿ ಗಮನಿಸಬಹುದು.
ಇದಕ್ಕೊಂದು ಕಾರಣ ಮಿಮಾನ್ಶೆಯನ್ನೂ ಕೆಲವ ಪಂಥಗಳು ಕೊಡುತ್ತವೆ.ಅವು ಹೇಳುವದೆನೆಂದರೆ ಧರ್ಮವು ವ್ಯಕ್ತಿಗತ ಅನುಭವದ
ಸ್ವರೂಪದಲ್ಲಿ ಶುದ್ಧವಾಗಿಯೇ ಇರುತ್ತದೆ ಆದರೆ ಅದು ಸಾಂಸ್ಥಿಕ ರೂಪ ತೂಟ್ಟಾಗ ಅದರ ಮೂಲಶುದ್ಧಿಯು ನಾಶವಾಗುತ್ತದೆ .ಹಾಗಾದರೆ ಧರ್ಮವು ಸಾಂಸ್ಥಿಕ ರುಪವನ್ನಾದರು ಏಕೆ ತೊಡಬೇಕು?ಎಂಬುದು ಒಂದು ಇನ್ನುಂದು ಸಮಸ್ಯೆ ಆಗುತ್ತದೆ.ಒಟ್ಟಾರೆ ಮನುಷ್ಯನ ಸಾಮೂಹಿಕ ಅಸ್ತಿತ್ವ ಹಾಗೂ ಅವನ ವ್ಯಕ್ತಿಗತ ಅಸ್ತಿತ್ವಗಳು ಧರ್ಮದ ಸಾಮೂಹಿಕ ಹಾಗು ವ್ಯಕ್ತಿಗತ ಅಸ್ತಿತ್ವಗಳ ವ್ಯವಸ್ಥಾಪನೆಯಲ್ಲಿ ಅನಾದಿ ಕಾಲದಿಂದಲೂ ಹಲವು ಪ್ರಶ್ನೆಗಳನ್ನು ಎದುರಿಸುತ್ತಲೇ ಬಂದಿವೆ 

No comments:

Post a Comment