Sunday, 20 November 2011

anudinaabhavaabdhiyalli....15

ಆದರೆ ಹರಿದಾಸರಿಗೆ ಈ ಸಂದರ್ಭದಲ್ಲಿ ಅವರಿಗೆ ತುಂಬಾ ಸಹಾಯವಾದುದು ಅವರ ನಂಬಿಕೆಯ ಜಗತ್ತಿನ ವಿಸ್ತಾರವಾದ ಪ್ರಮಾಣಗಳ ಒಳಗಿನ ರೂಪಕಗಲೆನ್ದೆ ಎನ್ನಬೇಕು.ವೇದ,ಉಪನಿಷತ್ತು,ಆಗಮಗಳು,ಪುರಾಣಗಳು,ಮಹಾಭಾರತ ,ರಾಮಾಯಣ,ಈ ಬ್ರಹತ್ ಚಿತ್ರ ಸಂಪುಟದ ನೆರವನ್ನು ಪಡೆಯದ ಒಬ್ಬ ಹರಿದಾಸರನ್ನು ನಾವು ಊಹಿಸಿಕೊಲುವದು ಸಾಧ್ಯವಿಲ್ಲ.ಅಲ್ಲದೆ ಬಹಳಷ್ಟು ಹರಿದಾಸರ ತಾತ್ವಿಕ ಭಿತ್ತಿಯಾಗಿದ್ದ ದ್ವೈತವನ್ನು ಹುಟ್ಟು ಹಾಕಿದ ಆಚಾರ್ಯ ಮಧ್ವರೆ ಈ ಸಂಪನ್ಮೂಲವನ್ನು ತತ್ವಜ್ಞಾನದ ಸಮರ್ಥನೆಗೂ ಹಾಗು  ಕಲಾತ್ಮಕವಾದ ಗೇಯ ರಚನೆಗಳಿಗೂ ಮೈದುಂಬಿ ಬಳಸಿಕೊಂಡರು .ಒಂದರ್ಥದಲ್ಲಿ ಅವರು ಈ ಸಂಪನ್ಮೂಲವನ್ನು ಹಾಗೆ ಬಳಸುವ ಮೂಲಕ ಮುಂದಿನವರಿಗೆ ಒಂದು ದ್ವೈತ ಕಾವ್ಯ ಮಿಮಾನ್ಸೆಯ ಒಂದು ನಕ್ಷೆಯನ್ನು ನಿರ್ಮಿಸಿಕೊಟ್ಟರು.
ಈ ಅರ್ಥದಲ್ಲಿಯೇ ನಾವು ದಾಸರ ಕನ್ನಡ ಭಾಷೆಯ ಬಳಕೆಯ ರೀತಿಯಲ್ಲೂ ಒಂದು ಬೇರೆ ಬಗೆಯನ್ನು ಕಾಣುತ್ತೇವೆ.ಅವರು ಎಷ್ಟೇ
ಪ್ರೀತಿಯಲ್ಲಿ ಕನ್ನಡದ ಜೊತೆಗೆ ಕೀಲಿಸಿಕೊಂದರೂ ಅವರ ಒಳ ಅನುಸಂಧಾನ ತಾನು ಕಾಲೂರಿದ ಸಂಸ್ಕ್ರತದ ಜೊತೆಗೂ ಗುಪ್ತ
ಸಂಬಧವನ್ನು ತನ್ನ ಆಪ್ತಸುಖಕ್ಕಾಗಿ ಬಹಳ ಆಳವಾಗಿ ಇಟ್ಟುಕೊಂಡಿರುತ್ತದೆ.ಈ ಕ್ರಿಯೆ ಬರಿ ಕನ್ನಡ ಬಲ್ಲವರಿಗೆ ತಿಳಿಯುವದೇ ಸಾಧ್ಯವಿಲ್ಲ.ಅದರ ವಾಚ್ಯವಾದ ಅಭಿವ್ಯಕ್ತಿಯೂ ನಮಗೆ ಅಲ್ಲಲ್ಲಿ ಕಾಣ ಸಿಗುತ್ತದಾದರೂ ಅದು ದಾಸರ ಭಾಷಿಕ ಬಾಹ್ಯ ಸಂಬಂಧದ ಬಗೆಗೆ ಯಾವುದೇ ಸುಳಿವು ಕೊಡುವದಿಲ್ಲ .ಅದರ ಬದಲು ಅದು ಭಾಷೆಯ ಹಂಗಿಲ್ಲದ ತಮ್ಮ ಭಕ್ತಿ -ತತ್ವದ
ಸಮರ್ಥನೆಗಾಗಿ ಅವರು ಬಳಸಿಕೊಳ್ಳುವ ಒಂದು ಉಪಾಯವಾಗಿ ಮಾತ್ರ ಅದು ಒಡೆದು ಕಾಣುತ್ತದೆ.
ಜಗನ್ನಾಥದಾಸರ ''ಹರಿಕಥಾಮ್ಬ್ರತಸಾರ''ದ ಅವರ ''ಇವು ಕನ್ನಡದ ಪದಗಳೆಂದು ನಿರಾಕರಿಸಬೇಡಿರಿ ''ಎಂಬ ಬಿನ್ನಹ
ಆ ಕಾಲದ ಭಾಷಿಕ ಇಕ್ಕತ್ತುಗಲಿಂದೆ ನಿರ್ಮಿತವಾಗಿದ್ದರೂ ಅದನ್ನು ಅವರು ಉದಾರವಾದಿ ಮತೀಯ ಇತಿವ್ರತ್ತವಾಗಿ
ಬದಲಾವಣೆ ಗೊಳಿಸಿ ಅರ್ಥವಿಸುತ್ತಾರೆ.

No comments:

Post a Comment