Saturday, 19 November 2011

anudinaabhavaabdhiyalli....15

ಆದರೆ ಹರಿದಾಸರು ಈ ಸಮಸ್ಯೆಯನ್ನು ಬೇರೆ ಬಗೆಯಲ್ಲಿ ಬಗೆಹರಿಸಿಕೊಂಡರು.ಅವರಿಗೂ ಭಾಷೆ ಹಾಗು ಭಾವ ಜಗತ್ತುಗಳ ನಡುವಿನ ಅಂತರ ಹಾಗು ವಿರೋಧ ಅನುಭವಸಿದ್ಧವಾದ ಸತ್ಯವೇ ಆಗಿದೆ.ತೀರ ಉತ್ಕಟ ಅನುಭವಗಳ ಅಭಿವ್ಯಕ್ತಿಯ ಸಂದರ್ಭದಲ್ಲಿ ಅವರೂ ಆ ಸಂಕಟವನ್ನು ಅನುಭವಿಸಿದವರೇ.ಭಗವಂತನ ದರ್ಶನವಾದ ಸಂದರ್ಭದಲ್ಲಿ ಅವರ ಅಭಿವ್ಯಕ್ತಿ ''ಆ ಬಾಹು,ಆ ಊರು ,ಆ ಜಾನು ,ಆ ಜಂಘೆ''ಎಂಬ ಬಗೆಯಲ್ಲಿ ದಿಕ್ಕುತಪ್ಪಿದವರಂತೆ ಬಡಬದಿಸುತ್ತದೆ.ಆದರೆ ಏನಿದ್ದರೂ ಅವರ ಭಾಷೆಯ ಬಗೆಗಿನ ವಿಷಾದ ,ವಚನಕಾರರಿಗಿದ್ದಷ್ಟು ಆಳವಾದದ್ದಲ್ಲ.ಇನ್ನೂ ಒಂದಿಷ್ಟು ಹತ್ತಿರವಾಗಿ ಹೋಗಿ ನೋಡಿದರೆ ದಾಸರು ತಮಗಿರುವ ಈ ರೀತಿಯ
ಭಾಷಿಕ ಮಿತಿಯನ್ನೂ ಅದು ತಮಗೆ ಪರಮಾತ್ಮನೇ ಒದಗಿಸಿದ ಕರುಣೆಯೆಂದು ಭಾವಿಸುತ್ತಾರೆ.ವಾದಿರಾಜರ ''ಏನು ಸುಕ್ರತವ ಮಾಡಿದಳೋ ಯೆಶೋದೆ''ಎಂಬ ಕೀರ್ತನೆ ದಾಸರ ಭಾಷೆಯ ಬಗೆಗಿನ ಪ್ರತಿಕ್ರಿಯೆಯು ಆಗಿರಬಹುದೆನಿಸುತ್ತದೆ.ಯೆಶೋದೆ ತನ್ನ ಮಗ ಕೃಷ್ಣನಿಗೆ ,ಬಾಲ ಗೋಪಾಲನಿಗೆ ,ತನ್ನ ಮಮತೆಯನ್ನು ಉಣಿಸುತ್ತಿದ್ದಾಳೆ ಅವಳು ಉಣಿಸುತ್ತಿರುದೆಲ್ಲ ಈ ಲೋಕ ಜೀವನದ ತಾಯಿಯೊಬ್ಬಳು ತನ್ನ ಮಗನಿಗೆ ತೋರಬಹುದಾದ ಮಮತೆ ಮಾತ್ರ.ಅದರ ಹೊರತು ಅವಳು ಬೇರೇನೂ ಮಾಡಲಾರಳು .ಒಂದರ್ಥದಲ್ಲಿ ಅವಳು ತೋರುತ್ತಿರುವ ಮಮತೆಯ ಕ್ರಿಯಾವಿಧಿಗಳು ಅರ್ಥಹೀನ ಕ್ರಿಯೆಗಳು.ಅವಳು''ಗಂಗಾ ಜನಕನಿಗೆ ಸ್ನಾನ ಮಾಡಿಸುವಳಂತೆ.''ಅಹಿತಲ್ಪನಿಗೆ ಹಾವು ಕಚ್ಚೀತು ಯೆನುವವಳಂತೆ''ಇವೆಲ್ಲವೂ ಅಲ್ಲಿರುವ ಲೌಕಿಕ ಅಲೌಕಿಕಗಳ ವ್ಯಾಮಿಶ್ರಣದಿಂದಾಗಿಯೇ ಅಪೂರ್ಣ ಹಾಗು ಅರ್ಥಹೀನ ಆಚರೆಣೆಗಳು ಆದರೆ ದಾಸರ ವಿಷಿಸ್ಥತೆ ಇರುವದೆ ಈ ಅನಿವಾರ್ಯವಾದ ಮಿತಿಯನ್ನೇ ತಮ್ಮ ಭಾಗ್ಯವೆಂದು ಭಾವಿಸುವ ಕ್ರಮದಲ್ಲಿದೆ.ಹರಿದಾಸರು ಎಂದೂ ವಚನಕಾರರೆನ್ತೆ ಭಾಷಾ
ವಿಶಾದಯೋಗವನ್ನು ಅನುಭವಿಸಲಿಲ್ಲ ಎಂಬುದು ಅವರ ಶಕ್ತಿಯು ಅಹುದು ಹಾಗು ಮಿತಿಯು ಅಹುದು ಎಂಬುದನ್ನು
ನಾವು ಗಮನಿಸಬಹುದು.
  

No comments:

Post a Comment