ಕಾವ್ಯ ಸ್ರಷ್ಟಿಯ ಇನ್ನೊಂದು ಸಮಸ್ಯೆಯೂ ನಮ್ಮ ಕವಿಗಳನ್ನು ತುಂಬಾ ಕಾಡಿಸಿದೆ.ಅದೆಂದರೆ ಭಾವ ಜಗತ್ತಿನ ಅವಶ್ಯಕತೆಗಳನ್ನು
ಪೂರೈಸಲು ಭಾಷೆಯ ಶಕ್ತಿಗೆ ಆಗದಿರುವದು.ಅಂದರೆ ಕವಿಗೆ ಅಭಿವ್ಯಕ್ತಗೊಳಿಸಬೇಕಾದ ಒಂದು ಭಾವ ಸಮುಚ್ಚಯವಿದೆ.ಅದು ಅಭಿವ್ಯಕ್ತಗೊಳ್ಳಲು ತನ್ನದೇ ಆದ ರೀತಿಯಲ್ಲಿ ಧದಪಡಿಸುತ್ತಿದೆ ಈಗ ಅದಕ್ಕೆ ತಕ್ಕ ಭಾಷೆ ಬೇಕು.ಕವಿಯ ಪ್ರತಿಭೆಯ ಸಮುಚ್ಚಯದಲ್ಲಿ
ಪ್ರಬಲವಾದ ಭಾಷೆಯ ಶಕ್ತಿಯೂ ಇದೆ.ಆದರೆ ಅವುಗಳ ನಡುವೆ ಸಮಬಲದ ಹೊಂದಾಣಿಕೆ ಇಲ್ಲ.ಭಾವದ ಭಾರ ಹೆಚ್ಚಾಗಿ ಭಾಷೆ
ಕುಸಿಯುವದು ಇಲ್ಲವೇ ಭಾಷೆಯ ಭಾರ ಹೆಚ್ಚಾಗಿ ಭಾವದ ಮುಖವು ಮುಚ್ಚಿಹೋಗುವದು ಇವು ಎಲ್ಲ ಕಾವ್ಯಗಳೂ ಎದುರಿಸಲೇಬೇಕಾದ ಅಗ್ನಿದಿವ್ಯಗಲಾಗಿವೆ.ಇ ಸಂಕಟವನ್ನು ನಮ್ಮ ಕವಿಗಳು ಎಷ್ಟು ಆಳವಾಗಿ ಅನುಭವಿಸಿದ್ದಾರೆಂದರೆ ಎಷ್ಟೋ ಸಲ
ಅವರ ಭಾವ ಜಗತ್ತಿನ ಒಂದು ಪ್ರಬಲವಾದ ಪ್ರಶ್ನೆಯಾಗಿಯೂ ಅದು ಅವರನ್ನು ಕಾದಿದೆ.
ನಮ್ಮ ವಚನಕಾರರು ಮತ್ತು ಹರಿದಾಸರು ಈ ಪ್ರಶ್ನೆಯನ್ನು ಅನುಭವಿಸಿದ,ಹಾಗು ಪರಿಹಾರ ಹುಡುಕುಕಿಕೊಂಡ ಕ್ರಮ ತೀರ
ವಿಶಿಷ್ಟವಾದುದು .ವಚನಕಾರರಿಗೆ ಭಾಷೆಯ ಶಕ್ತಿಯ ಮೇಲೆ ಅಪನಂಬಿಕೆ,ಸಂಶಯ,ನಿರಾಶೆಗಳು ತುಂಬಿಕೊಂಡಿವೆ.ಕಾವ್ಯಕ್ಕೆ ಈ ಹಿಂದೆ ವಸ್ತುವಾಗಿ ಸಹಜವಾಗಿ ದಕ್ಕುತ್ತಿದ್ದ ವೈದಿಕ ಜಗತ್ತಿನ ಜೊತೆಗೂ ವಚನಕಾರರು ಒಂದು ಬಗೆಯ ದಾರ್ಶನಿಕ ವಿರೋಧವನ್ನು
ತಾತ್ವಿಕ ಭೂಮಿಕೆಯ ಅಗತ್ಯವಾಗಿ ರೂಧಿಸಿಕೊನ್ದದ್ದರಿನ್ದ ಆ ಜಗತ್ತಿನ ಸಂಪನ್ಮೂಲವನ್ನು ಅವರು ಮುಟ್ಟುವನ್ತಿರಲಿಲ್ಲ.ಆದರೆ ತಮ್ಮ
ಒಳಗಿನ ಪ್ರಚಂಡವಾದ ಭಾವ ಪ್ರಪಂಚವನ್ನು ಅಬಿವ್ಯಕ್ತಿಸದೆ ಇರುವದೂ ಅವರಿಗೆ ಸಾಧ್ಯವಿರಲಿಲ್ಲ.ಅದಕ್ಕಾಗಿ ಅವರು ತಮ್ಮ
ಅವಶ್ಯಕತೆಗಾಗಿ ಅತ್ಯಂತ ಅನನ್ಯವಾದ ,ಆದೀಮವೆಮ್ಬಂತೆ ಕಾಣುವ,ಸುತ್ತಲಿನ ಭೂಮ ಬ್ರಮ್ಹಾನ್ದವನ್ನೇ ನೆಚ್ಚಿದ,ಒಂದು
ತೀರ ವಿಶಿಷ್ಟವಾದ ಕಾವ್ಯ ಭಾಷೆಯನ್ನೂ ಅವರು ಸ್ರಷ್ಟಿಸಿಕೊಳ್ಳುವದು ಅವರ ಅನಿವಾರ್ಯವಾದ ಹಾಗು ಅನುಭವಗಳ
ವ್ಯಾಖ್ಯಾನದ ಆಕ್ರತಿಗಳ ಒಳ ಒತ್ತಡಗಳ ಅನಿವಾರ್ಯ ಪರಿಣಾಮವೇ ಆಗಿತ್ತು.ಇಷ್ಟಾದರೂ ಅವರ ವಚನಗಲ್ಲಿ ನಮಗೆ
ಮತ್ತೆ ಮತ್ತೆ ಕಾಣುವ ಅವರ ಭಾಷೆಯಂಬ ಮಾಧ್ಯಮದ ಬಗೆಗಿನ ತೀವ್ರ ಹೋರಾಟವೂ ಅವರ ಒಟ್ಟು ಚಿಂತನ ಜಗತ್ತಿನ
ಒಂದು ದೊಡ್ಡ ಭಾಗವಾಗಿಯೇ ನಮಗೆ ಕಾಣುತ್ತದೆ.ಅಲ್ಲಮ ಅಭಿವ್ಯಕ್ತಿಯೆನ್ನುವದೆ ''ಶಬ್ದ-ಸೂತಕ''ಎನ್ನುತ್ತಾನೆ.ಅನುಭವದ
ಹತ್ತರ ಹೋಗಲು ನಡೆವ ಭಾಷೆಯ ''ಶಬ್ದದ ಲಜ್ಜೆಯನ್ನು''ಆತ ಗುರುತಿಸುತ್ತಾನೆ.ಮಾತೆಂಬ ಜೋತಿರ್ಲಿಂಗದ ಬಗೆಗೆ
''ನುಡಿಯುವವ'' ''ಪಾತಕಿ'' ಎನ್ನುತ್ತಾನೆ ಅಲ್ಲಮ.
No comments:
Post a Comment